ಬೆಂಗಳೂರು: ಮಹಾರಾಜ ಟ್ರೋಫಿಯ 27ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವು ಮಂಗಳೂರು ಡ್ರ್ಯಾಗನ್ಸ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ ಜಯಭೇರಿ ಬಾರಿಸಿದೆ, ನಾಯಕ ಮನೀಶ್ ಪಾಂಡೆ ಅಜೇಯ 56 ರನ್ ಗಳಿಸಿದರೆ, ಮೋಹಿತ ಅಜೇಯ 20 ರನ್ ಗಳಿಸಿ ಗೆಲುವಿನ ರೂವಾರಿಗಳಾದರು. 33 ರನ್ಗಳಿಗೆ 5 ವಿಕೆಟ್ ಪಡೆದ ಹುಬ್ಬಳ್ಳಿ ಟೈಗರ್ಸ್ನ ಮನ್ವಂತ ಕುಮಾರ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನಾರದರು. ಮಂಗಳೂರು ಡ್ರ್ಯಾಗನ್ಸ್ ಪರ ಕೃಷ್ಣಮೂರ್ತಿ ಸಿದ್ದಾರ್ಥ ಗರಿಷ್ಠ 53 ರನ್ ಗಳಿಸಿದರು.