Home Advertisement
Home ನಮ್ಮ ಜಿಲ್ಲೆ ಹೆಣ ತಗೊಂಡು ನಾವೇನು ಮಾಡೋಣ

ಹೆಣ ತಗೊಂಡು ನಾವೇನು ಮಾಡೋಣ

0
210

ಶಿವಮೊಗ್ಗ : ಸತ್ರೂ ಬಿಜೆಪಿ ಸೇರಲ್ಲ ಎಂದು ಹೇಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರು ನಿನ್ನೆ ಸತ್ತರೂ ಬಿಜೆಪಿ ಸೇರಲ್ಲ ಎಂದು ಹೇಳಿದ್ದರು.
ಅದಕ್ಕೆ ಇಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಅವರು ಬದುಕಿದ್ದಾಗಲೇ ಬಿಜೆಪಿಗೆ ಸೇರಿಸಲ್ಲ, ಇನ್ನು ಸತ್ತ ಮೇಲೆ ಅವರ ಹೆಣ ಇಟ್ಟುಕೊಂಡು ಏನು ಮಾಡಲಿ, ಅವರ ಹೆಣವನ್ನು ನಾಯಿನೂ ಮೂಸಲ್ಲ ಎಂದು ಟೀಕಿಸಿದ್ದಾರೆ.
ಆಡಳಿತ ಪಕ್ಷವಾದ ಬಿಜೆಪಿಯ ರಾಜ್ಯಾಧ್ಯಕ್ಷರ ಬಗ್ಗೆ ಹುಚ್ಚುಹುಚ್ಚಾಗಿ ಮಾತನಾಡುವುದು ಮಾಜಿ ಮುಖ್ಯಮಂತ್ರಿಯಾಗಿ ಸಿದ್ದರಾಮ್ಯಯನವರಿಗೆ ಘನತೆಯಲ್ಲ ಎಂದರು.