ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಜಮೀರ್ ಅಹ್ಮದ್ ನೇರ​ ​ಕಾರಣ

0
16

ಸಾವಿರ ಗೋವು ತಂದು ಕೊಟ್ಟರೂ ಪಾಪ ತೊಳೆದುಕೊಳ್ಳಲು ಸಾಧ್ಯವಿಲ್ಲ.

ಬೆಂಗಳೂರು: ಜಮೀರ್ ಅಹಮ್ಮದ್​ ಬಾಲಬಿಚ್ಚಲು ಸಿಎಂ ಸಿದ್ದರಾಮಯ್ಯ ಕಾರಣ ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಾಮರಾಜಪೇಟೆಯಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಹಿಂದೂಗಳನ್ನ ಓಡಿಸಲು ಷಡ್ಯಂತ್ರ. ಸಚಿವ ಜಮೀರ್ ಮೂರು ಹಸು ಕೊಡಿಸುತ್ತೇನೆ ಎಂದಿದ್ದಾರೆ. ಅವರಿಗೆ ಭಾವನೆಯೇ ಇಲ್ಲ, ಅದೇನು ಆಟದ ವಸ್ತುವಾ? ಸಾವಿರ ಗೋವು ತಂದು ಕೊಟ್ಟರೂ ಪಾಪ ತೊಳೆದುಕೊಳ್ಳಲು ಸಾಧ್ಯವಿಲ್ಲ. ಜಮೀರ್ ಮಾಡುತ್ತಿರುವ ಈ ಕೆಲಸವನ್ನು ಮುಸ್ಲಿಮರೇ ಮೆಚ್ಚುವುದಿಲ್ಲ, ಜಮೀರ್ ಅಹ್ಮದ್​ ಕೊಡುವ ಹಣಕ್ಕಾ ಕಾಂಗ್ರೆಸ್​ನವರು ಅವರ ಹಿಂದೆ ಹೋಗುತ್ತಾರೆ ಅಷ್ಟೇ. ಜಯನಗರ, ಬಿಟಿಎಂ ಲೇಔಟ್​ ಎಲ್ಲೂ ನಡೆಯದ ಘಟನೆ ಚಾಮರಾಜಪೇಟೆಯಲ್ಲಿ ಏಕೆ ನಡೆಯುತ್ತದೆ? ಎಂದು ಪ್ರಶ್ನಿಸಿದರು. ಮುಸ್ಲಿಮರಲ್ಲಿ ಒಳ್ಳೆಯವರಿದ್ದಾರೆ, ಆದರೆ ನಾಯಕತ್ವ ಪ್ರಶ್ನಿಸುತ್ತಿದ್ದೇನೆ. ಎಫ್​ಐಆರ್​ ಸರಿಯಾಗಿ ಹಾಕಿಲ್ಲ, ಅಮಾಯಕನನ್ನು ಕರೆತಂದು ಕೂರಿಸಿದ್ದಾರೆ. ಕೆಚ್ಚಲು ಕೊಯ್ದ ಪ್ರಕರಣದಲ್ಲಿ ಅಮಾಯಕನನ್ನು ಬಂಧಿಸಿದ್ದಾರೆ. ಪ್ರಕರಣ ಮುಚ್ಚಿಹಾಕಲು ಬಿಹಾರ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ನಿಜವಾದ ಆರೋಪಿಯನ್ನು ಬಂಧಿಸಬೇಕು, ಚಾಮರಾಜಪೇಟೆಯಲ್ಲಿ ಸಿಸಿಕ್ಯಾಮರಾಗಳು ಹೆಚ್ಚು ಅಳವಡಿಸಬೇಕು. ಜಮೀರ್ ಅಹಮ್ಮದ್​ ಬಾಲಬಿಚ್ಚಲು ಸಿಎಂ ಸಿದ್ದರಾಮಯ್ಯ ಕಾರಣ. ಕಲ್ಲು ಎಸೆಯುವವರು, ಬೆಂಕಿ ಹಚ್ಚುವವರನ್ನು ತಯಾರು ಮಾಡುತ್ತಿದ್ದಾರೆ, 2,227 ಹಸುಗಳು ಆ ಭಾಗದಲ್ಲಿವೆ. ಪಶು ಆಸ್ಪತ್ರೆ ಡೆಮಾಲಿಷ್ ಮಾಡಿ ಸ್ಕೂಲ್ ಕಟ್ಟಲು ಹೊರಟಿದ್ದಾರೆ. ಬೇರೆ ಕಡೆಯಲ್ಲಿ ಸ್ಕೂಲ್ ಕಟ್ಟಲಿ. ಮದರಸ ಎದುರು ಅಲ್ಲಿ ಹಸುಗಳನ್ನು ಕಟ್ಟುತ್ತಾರೆ. ಘಟನೆಗೆ ಸಚಿವ ಜಮೀರ್ ಅಹ್ಮದ್ ನೇರ ಕಾರಣ ಎಂದು ಆರೋಪಿಸಿದ್ದಾರೆ.

Previous articleಸತೀಶ್ ಮುಖ್ಯಮಂತ್ರಿಯಾಗಲಿ, ಹರಕೆ ಹೊತ್ತ ಅಯ್ಯಪ್ಪ ಸ್ವಾಮಿ ಭಕ್ತ
Next articleಅಪಾಯದ ಅಡಿಯಲ್ಲಿ ಚುರುಕು ನೋಟ ಬಿಡುಗಡೆ