ಬೆಂಕಿ ಅವಘಡ: ಪರಿಕರಗಳು ಬೆಂಕಿಗೆ ಆಹುತಿ

0
26
ಬೆಂಕಿ

ಕೊಪ್ಪಳ: ನಗರದ ನಗರಸಭೆ ಪಕ್ಕದಲ್ಲಿರುವ ವಾಣಿಜ್ಯ ಮಳಿಗೆಯಲ್ಲಿ ಶನಿವಾರ ಬೆಳಗಿನ ಜಾವ ಬೆಂಕಿ ಅವಘಡ ಸಂಭವಿಸಿದ್ದು, ಮಳಿಗೆಯಲ್ಲಿ ಪರಿಕರಗಳು ಬೆಂಕಿಗೆ ಆಹುತಿಯಾಗಿವೆ.

ವಾಣಿಜ್ಯ ಮಳಿಗೆಯು ನಗರಸಭೆಗೆ ಸೇರಿದ್ದಾಗಿದ್ದು, ನಗರಸಭೆಯ ವಿದ್ಯುತ್ ಗುತ್ತಿಗೆದಾರ ಮೌಲಾಸಾಬ್ ಬನ್ನಿಕೊಪ್ಪ ಎನ್ನುವವರು ಬಾಡಿಗೆ ಪಡೆದಿದ್ದಾರೆ‌.

ದಾಖಲೆಗಳ ನಾಶ ಮಾಡಲು ಯಾರೋ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗುತ್ತಿದ್ದು, ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleಗರ್ಭಿಣಿ ಹತ್ಯೆ ಮಾಡಿದ್ದ ಪತಿ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ
Next articleಪತ್ನಿ ಅಪಹರಣ ಪ್ರಕರಣ ಸುಖಾಂತ್ಯ