ಬಿಜೆಪಿ ಸರ್ಕಾರದ ಯೋಜನೆಗಳು ಎಂಬ ಕಾರಣಕ್ಕೆ ಮೂಲೆಗೆ…

0
45

ರೈತ ವಿದ್ಯಾನಿಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಮರುಜಾರಿಗೊಳಿಸಿ

ಬೆಂಗಳೂರು: ʼರೈತ ವಿದ್ಯಾನಿಧಿ’ ಯೋಜನೆಯನ್ನು ಮೂಲೆಗೆ ತಳ್ಳಿರುವುದು ಈ ಸರ್ಕಾರಕ್ಕೆ ಬಡ ಹಾಗೂ ಅನ್ನದಾತರ ಮಕ್ಕಳ ಮೇಲಿರುವ ಅಸಡ್ಡೆತನವನ್ನು ಸಾಕ್ಷೀಕರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕಿಸಾನ್ ಸಮ್ಮಾನ್ ಯೋಜನೆಯಡಿ ಮೋದಿ ಜೀ ಅವರ ₹6000 ರೂ. ಜತೆಗೆ ಅಂದಿನ ಮುಖ್ಯಮಂತ್ರಿ ಮಾನ್ಯ ಯಡಿಯೂರಪ್ಪ ಅವರ ಸರ್ಕಾರ ನೀಡುತ್ತಿದ್ದ ₹4000 ರೂಗಳನ್ನು ನಿಲ್ಲಿಸಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಮಾನ್ಯ ಬಸವರಾಜ ಬೊಮ್ಮಾಯಿ
ಅವರ ನೇತೃತ್ವದ ಕರ್ನಾಟಕ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರೈತರು ಹಾಗೂ ಕೃಷಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ವರದಾನವಾಗಿದ್ದ ಜನಪ್ರಿಯ’ರೈತ ವಿದ್ಯಾನಿಧಿ’ ಯೋಜನೆಯನ್ನು ಮೂಲೆಗೆ ತಳ್ಳಿರುವುದು ಈ ಸರ್ಕಾರಕ್ಕೆ ಬಡ ಹಾಗೂ ಅನ್ನದಾತರ ಮಕ್ಕಳ ಮೇಲಿರುವ ಅಸಡ್ಡೆತನವನ್ನು ಸಾಕ್ಷೀಕರಿಸುತ್ತದೆ.

ಕೃಷಿಕ ಕುಟುಂಬದ ಲಕ್ಷಾಂತರ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದ್ದ ರೈತ ವಿದ್ಯಾನಿಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಮರುಜಾರಿಗೊಳಿಸದಿದ್ದರೆ ನಾಡಿನ ಕೋಟ್ಯಂತರ ರೈತ ಕುಟುಂಬಗಳ ಶಾಪಕ್ಕೆ ಈ ಸರ್ಕಾರ ಗುರಿಯಾಗಲಿದೆ, ಅಲ್ಲದೇ ಬಿಜೆಪಿ ಸರ್ಕಾರದ ಯೋಜನೆಗಳು ಎಂಬ ಕಾರಣಕ್ಕೆ ಜನಪರ ಯೋಜನೆಗಳನ್ನು ಮೂಲೆಗೆ ತಳ್ಳುವ ಕರ್ನಾಟಕ ಕಾಂಗ್ರೆಸ್‌ ಸರ್ಕಾರವನ್ನು ನಾಡಿನ ಜನಸಾಮಾನ್ಯರು ಮೂಲೆಗೆ ತಳ್ಳುವ ಕಾಲ ದೂರವಿಲ್ಲ ಎಂದು ಎಚ್ಚರಿಸಬಯಸುವೆ ಎಂದಿದ್ದಾರೆ.

Previous articleಕರ್ನಾಟಕದ ಕುಂಭಮೇಳ: ಭಕ್ತರಿಗೆ ಶುಭ ಕೋರಿದ ಪ್ರಲ್ಹಾದ ಜೋಶಿ
Next articleಪ್ರಯಾಗ್‌ರಾಜ್‌ನಲ್ಲಿ 3 ದಿನಗಳ ಕಾಲ ಅಂತಾರಾಷ್ಟ್ರೀಯ ಪಕ್ಷಿ ಉತ್ಸವ