ಧಾರವಾಡ: ಕಬ್ಬು, ಗೋವಿನಜೋಳ, ಭತ್ತ ಹಾಳಾಗಿದೆ. ಆದರೆ, ಬರ ಘೋಷಣೆಯಲ್ಲಿ ತಾಲೂಕನ್ನು ಸೇರ್ಪಡೆ ಮಾಡಿಲ್ಲ ಎಂದು ಬರ ಅಧ್ಯಯನ ತಂಡದ ಎದುರು ಅಳ್ನಾವರ, ಕಲಘಟಗಿ ತಾಲೂಕಿನ ರೈತರು ಅಳಲು ತೋಡಿಕೊಂಡರು.
ಬೆಳೆ ಸಂಪೂರ್ಣ ಹಾಳಾಗಿದೆ. ಕುಡಿಯುವ ನೀರಿಗೂ ಬರ ಬಂದಿದೆ. ಆದರೆ, ರೈತರನ್ನು ಕಡೆಗಣನೆ ಮಾಡಲಾಗಿದೆ ಎಂದು ತಂಡಕ್ಕೆ ಕಲಘಟಗಿ ರೈತರು ಮನವರಿಕೆ ಮಾಡಿಕೊಟ್ಟರು.