Home Advertisement
Home ತಾಜಾ ಸುದ್ದಿ ದುಡಿದವರು ಬೇರೆ, ಉಂಡವರು ಬೇರೆ

ದುಡಿದವರು ಬೇರೆ, ಉಂಡವರು ಬೇರೆ

0
194
yatnal

ನವಲಗುಂದ: ಲಿಂಗಾಯತರೊಳಗೆ ಸಾಕಷ್ಟು ನಾಯಕರಿದ್ದಾರೆ. ಲಿಂಗಾಯತ ಹೆಸರು ಹೇಳಿಕೊಂಡು ಶಾಸಕ, ಮಂತ್ರಿ, ಮುಖ್ಯಮಂತ್ರಿ, ಸ್ಪೀಕರ್ ಆಗಿ ಸುಖ ಉಂಡಿದ್ದಾರೆ. ದುಡಿದವರು ಬೇರೆ. ಉಂಡವರು ಬೇರೆ. ಎಂದು ಜಗದೀಶ ಶೆಟ್ಟರ್ ಅವರ ವಿರುದ್ಧ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ.
ಬಿಜೆಪಿಯಲ್ಲಿ ಎಲ್ಲ ಸುಖವನ್ನು ಅನುಭವಿಸಿ ಬಿಟ್ಟು ಹೋಗಿದ್ದಾರೆ. ಶೆಟ್ಟರ ಹೋಗಿರುವುದರಿಂದ ಪಕ್ಷಕ್ಕೆ ತೊಂದರೆಯಿಲ್ಲ. ಯುವ ನಾಯಕತ್ವ ಬರುತ್ತೆ. ದೇಶಕ್ಕೆ ನರೇಂದ್ರ ಮೋದಿಯವರಂತಹ ಸ್ವಚ್ಛ ಆಡಳಿತ ಬೇಕು. ನೂರಕ್ಕೆ ನೂರು ಸಲವೂ ನಿಚ್ಚಳ ಬಹುಮತ ಬರುತ್ತೆ ಎಂದರು.