ಬೆಂಗಳೂರು: ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿರುವ ಶೃಂಗೇರಿ ಶಾಖಾ ಮಠದ ಶ್ರೀ ಪುರುಷೋತ್ತಮ ಭಾರತೀ ಸ್ವಾಮೀಜಿ (75) ಅವರು ಇಂದು ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸ್ವಾಮೀಜಿಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಪರಮಪದ ಪಡೆದಿದ್ದಾರೆ.
ಶ್ರೀ ಪುರುಷೋತ್ತಮ ಭಾರತೀ ಸ್ವಾಮೀಜಿಗಳು ಶಿವಗಂಗೆಯ ಶಾಖಾ ಮಠದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಜೀವನದಲ್ಲಿ ಸಂನ್ಯಾಸ ಪರಂಪರೆಯ ತತ್ವ, ಶಾಸ್ತ್ರಾಧ್ಯಯನ ಹಾಗೂ ಭಕ್ತಿಭಾವವನ್ನು ಸಾರುವ ಅನೇಕ ಉಪನ್ಯಾಸಗಳು ನಡೆದಿದ್ದವು.
ಇಂದು ಮಧ್ಯಾಹ್ನ 2 ಗಂಟೆಗೆ ಮಠದ ಆವರಣದಲ್ಲೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ. ಮಧ್ಯಾಹ್ನದವರೆಗೆ ಭಕ್ತರು ಮತ್ತು ಶಿಷ್ಯರು ಶ್ರೀಗಳ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಅವರ ನಿಧನಕ್ಕೆ ಗಣ್ಯರು, ಭಕ್ತರು ಹಾಗೂ ಮಠದ ಶಿಷ್ಯವೃಂದರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ.
























Nice post. I was checking continuously this blog and I am impressed!
Very helpful info particularly the remaining phase
🙂 I handle such info a lot. I was looking for this certain info for a long
time. Thanks and best of luck.
Good day! Would you mind if I share your blog
with my twitter group? There’s a lot of people that I think would really appreciate your content.
Please let me know. Thanks