ಸಚಿವ ಎಂ. ಬಿ.ಪಾಟೀಲ್ ಭೇಟಿಯಾದ ಉದ್ಯಮಿ ಕಿರಣ್‌ ಮಜುಂದಾರ್‌ ಷಾ

2
341

ಬೆಂಗಳೂರು: ಬಯೋಕಾನ್ ಸಂಸ್ಥಾಪಕಿ ಮತ್ತು ಉದ್ಯಮಿ ಕಿರಣ್‌ ಮಜುಂದಾರ್‌ ಷಾ ಅವರು ಇಂದು ಕರ್ನಾಟಕ ಬೃಹತ್ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್ ಅವರನ್ನು ಭೇಟಿ ಮಾಡಿದರು.

ಸಚಿವರನ್ನು ಭೇಟಿಯಾದ ನಂತರ ಮಾತನಾಡಿದ ಎಂ.ಬಿ. ಪಾಟೀಲ್ ಅವರು, “ಕಿರಣ್‌ ಮಜುಂದಾರ್‌ ಷಾ ನನ್ನನ್ನು ತಮ್ಮ ಸೋದರಳಿಯ ವಿವಾಹಕ್ಕೆ ಆಹ್ವಾನಿಸಲು ಬಂದಿದ್ದರು. ಆ ವಿವಾಹ ಸಮಾರಂಭ ನವೆಂಬರ್ 9ರಂದು ನಡೆಯಲಿದೆ,” ಎಂದು ತಿಳಿಸಿದರು.

ಭೇಟಿಯ ವೇಳೆ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ. ಇದರೊಂದಿಗೆ, ಇತ್ತೀಚೆಗೆ ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಟೀಕೆಗಳ ವಿಷಯಕ್ಕೂ ಸಚಿವರು ಸ್ಪಷ್ಟನೆ ನೀಡಿದರು.

“ಕೆಲಸ ನಡೆಯುತ್ತಿರುವಾಗ ಅಂತಹ ಟೀಕೆಗಳು ಅಗತ್ಯವಿರಲಿಲ್ಲ. ನಾವು ಕೆಲಸ ಮಾಡದಿದ್ದರೆ ಅದು ಬೇರೆ ವಿಷಯವಾಗಿರುತ್ತಿತ್ತು. ಆದರೆ ನಾವು ನಿರಂತರವಾಗಿ ಕಾಮಗಾರಿ ನಡೆಸುತ್ತಿದ್ದೇವೆ. ಆದ್ದರಿಂದ ಆ ವಿಷಯ ಅಲ್ಲಿ ಕೊನೆಗೊಳ್ಳುತ್ತದೆ,” ಎಂದು ಪಾಟೀಲ್ ಹೇಳಿದರು.

ಅವರು ಮುಂದುವರೆದು, “ಕಿರಣ್‌ ಮಜುಂದಾರ್‌ ಷಾ ಅವರು ನಮ್ಮೊಂದಿಗೆ ಹಲವು ವಿಷಯಗಳನ್ನು ಚರ್ಚಿಸಿದರು. ಅವರು ನಮ್ಮ ಸರ್ಕಾರದ ಕಾರ್ಯದ ಬಗ್ಗೆ ಹೆಮ್ಮೆಪಟ್ಟಿದ್ದಾರೆ. ನಾವೂ ಅವರ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇವೆ. ಮುಂದಿನ ದಿನಗಳಲ್ಲಿ ಕೈಗಾರಿಕಾ ವಲಯದ ಅಭಿವೃದ್ಧಿಗಾಗಿ ಅವರ ಬೆಂಬಲ ನಿರೀಕ್ಷಿಸುತ್ತೇವೆ,” ಎಂದು ಸಚಿವ ಪಾಟೀಲ್ ಹೇಳಿದರು.

ಕಿರಣ್‌ ಮಜುಂದಾರ್‌ ಷಾ ಅವರು ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿರುವುದನ್ನು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.

Previous articleಜಪಾನ್‌ನಲ್ಲಿ ಭಾರತೀಯರಿಗೆ UPI ಪಾವತಿ ಸೌಲಭ್ಯ
Next articleಟ್ವೀಟ್ ಸಮರ ತಣ್ಣಗಾಯಿತೇ? ಸಿಎಂ, ಡಿಸಿಎಂ ಭೇಟಿಯಾದ ಕಿರಣ್ ಮಜುಂದಾರ್ ಶಾ

2 COMMENTS

  1. Great goods from you, man. I’ve keep in mind your stuff previous
    to and you are simply extremely excellent. I really like what you’ve got here, certainly
    like what you’re stating and the way through which you assert it.
    You are making it enjoyable and you still take care of to keep it smart.
    I can’t wait to learn far more from you. This is really
    a terrific site.

LEAVE A REPLY

Please enter your comment!
Please enter your name here