ವಾಹನಗಳ ‘ಹವಾ’ ಬಿಟ್ಟ ದಲಿತ ಮುಖಂಡರು

0
21

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರ ಬಂದ್ ಕರೆ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಬೀದಿಗಿಳಿದ ದಲಿತ ಸಂಘಟನೆಗಳ ಮುಖಂಡರು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಅಂಬೇಡ್ಕರ್ ಪೋಟೋ ಹಿಡಿದು ಪ್ರತಿಭಟನೆ ನಡೆಸಿದರು.

ಬಂದ್ಗೆ ಜರೆ ನೀಡಿದಾಗಲೂ ಸಂಚಾರ ನಡೆಸಿದ್ದ ವಾಹನಗಳನ್ನು ತಡೆದು ಟೈರ್ ಗಾಳಿ ಬಿಟ್ಟು, ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದರು. ಕೈಯಲ್ಲಿ ಕಲ್ಲು ಹಿಡಿದು, ಹೋಟೆಲ್, ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ ಒತ್ತಾಯಿಸಿದರು. ಬಳಿಕ ಚನ್ನಮ್ಮ ವೃತ್ತದಲ್ಲಿ ಟೈರ್ ಗೆ ಬೆಂಕಿ‌ ಹಚ್ಚಿ ಆಕ್ರೋಷ ಹೊರ ಹಾಕಿದರು.

ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ನಗರದ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಪರ ಊರಿನಿಂದ ಆಗಮಿಸಿದ ಜನರು, ಬಸ್ ಗಳಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಶಾಲಾ-ಕಾಲೇಜುಗಳಿಗೆ ಜೆ ನೀಡಲಾಗಿತ್ತು.

ಕಿತ್ತೂರು ಚನ್ನಮ್ಮ ವೃತ್ತಕ್ಕೆ ಆಗಿಸಿದ ಶಾಸಕ ಪ್ರಸಾದ ಅಬ್ಬಯ್ಯ ಪ್ರತಿಭಟನಾ ನಿರತರಿಗೆ ಬೆಂಬಲ ಸೂಚಿಸಿ, ಧಾರವಾಡಕ್ಕೆ ಪ್ರಯಾಣ ಬೆಳೆಸಿದರು.

Previous articleಒತ್ತಾಯ ಪೂರ್ವಕ ಬಂದ್.. ಸಿಕ್ಕ ಸಿಕ್ಕವರಿಗೆ ಕಪಾಳಮೋಕ್ಷ
Next articleನಕ್ಸಲರಿಗೆ ಪ್ಯಾಕೇಜ್ ಆಮಿಷ ಒಡ್ಡಿರುವುದು ಸರಕಾರದ ತಪ್ಪು ನಡೆ