ಮೇವಿನ ಬಣವೆಗೆ ಬೆಂಕಿ

0
46

ಧಾರವಾಡ(ಕುಂದಗೋಳ): ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ರೈತರು ಶೇಖರಣೆ ಮಾಡಿಟ್ಟಿದ್ದ ಮೇವಿನ ತಗಡಿನ ಶೆಡ್‌ಗೆ ಬೆಂಕಿ ತಗುಲಿ ಮೇವು ಹಾನಿಯಾದ ಘಟನೆ ನಡೆದಿದೆ.
ರೊಟ್ಟಿಗವಾಡ ಗ್ರಾಮದ ದ್ಯಾಮಣ್ಣ ಕಲಬಾರ ಹಾಗೂ ಬಸಪ್ಪ ಕಬ್ಬೆಳ್ಳಿ ಎಂಬ ರೈತರು ಶೇಖರಣೆ ಮಾಡಿದ್ದ ಮೇವು ಸುಟ್ಟಿದೆ. ಅಂದಾಜು ೧ ಲಕ್ಷಕ್ಕೂ ಹೆಚ್ಚು ಮೊತ್ತದ ಮೇವು ಸುಟ್ಟು ಹೋಗಿದೆ. ಸ್ಥಳಕ್ಕೆ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ಇಲಾಖೆಯ ಅಧಿಕಾರಿ ಆರ್.ಎಮ್. ಬೇಪಾರಿ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಗ್ರಾಮಸ್ಥರು ಇದ್ದರು.

Previous articleಮಕ್ಕಳಲ್ಲಿ ಸ್ವಂತಿಕೆ ಬೆಳೆಸಲು ಸಹಕರಿಸಿ
Next articleಬಿಎಸ್‌ವೈದ್ದು ಬ್ಲಾಕ್ ಮೇಲ್ ರಾಜಕಾರಣ