Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಮಹಾ ಮಳೆಗೆ ಕಾರವಾರದಲ್ಲಿ ಗುಡ್ಡ ಕುಸಿತ : ನದಿಗೆ ಬಿದ್ದ ಟ್ಯಾಂಕರ್, ಐವರು ನಾಪತ್ತೆ

ಮಹಾ ಮಳೆಗೆ ಕಾರವಾರದಲ್ಲಿ ಗುಡ್ಡ ಕುಸಿತ : ನದಿಗೆ ಬಿದ್ದ ಟ್ಯಾಂಕರ್, ಐವರು ನಾಪತ್ತೆ

0
131

ಕಾರವಾರ: ಅಂಕೋಲಾ ತಾಲೂಕಿನ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಿಂದ, ಗುಡ್ಡ ಕುಸಿದ ರಭಸಕ್ಕೆ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಟ್ಯಾಂಕರ್ ಗಂಗಾವಳಿ ನದಿಗೆ ಬಿದ್ದು ತೇಲಿಕೊಂಡು ಹೋಗಿದೆ, ಇನ್ನೊಂದೆಡೆ, ಒಂದೇ ಕುಟುಂಬದ ಐವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಗಂಗಾವಳಿ ನದಿಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಅಂಕೋಲಾ ಮತ್ತು ಕುಮಟಾ ನಡುವಿನ ರಸ್ತೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.