ಮನೆ ಬಾಗಿಲಿಗೆ ಬಂದ ಒಂಟಿ ಸಲಗ

0
61

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ಮನೆ ಬಾಗಿಲಿಗೆ ಒಂಟಿ ಸಲಗ ಮತ್ತು ಗಾಬರಿ ಮೂಡಿಸಿದೆ.

ಯಶವಂತ್ ರವರ ಮನೆ ಬಾಗಿಲಿಗೆ ಬಂದ ಒಂಟಿ ಸಲಗ ಕಂಡು ಕ್ಷಣ ಕಾಲ ಆತಂಕಕ್ಕೆ ಒಳಗಾಗಿದ್ದಾರೆ.

ಅಂಗಳದಲ್ಲಿ ಕಾಣಿಸಿದ ಆನೆ ಕ್ರಮೇಣ ಮನೆ ಬಾಗಿಲವರೆಗೂ ಬಂದು ಹಿಂತಿರುಗಿದೆ.ಆನೆ ಬಂದ ದೃಶ್ಯವನ್ನು ಹೆದರುತ್ತಲೇ ಮನೆ ಮಾಲೀಕ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.

ಆನೆಗಳ ಆವಾಸ ಸ್ಥಾನದಲ್ಲಿ ಕೃಷಿ ಸಾಗುವಳಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಳ್ಳುತ್ತಿರುವುದರ ಜೊತೆಗೆ ಆನೆಗೆ ಅಗತ್ಯ ಇರುವ ಆಹಾರ ಸರಪಳಿಯಲ್ಲಿಯೂ ವ್ಯತ್ಯಾಸವಾಗಿರುವುದು ಇಂಥ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ವಿಶ್ಲೇಷಿಸಿದ್ದಾರೆ.

Previous articleಮಾದಕ ವಸ್ತು  ಮಾರಾಟ ಮಾಡುತ್ತಿದ್ದವನ ಸೆರೆ
Next articleಸರಕಾರಿ ನೌಕರರಂತೆ ಪರಿಗಣಿಸಲು ಪೌರಸೇವಾ ನೌಕರರ ಆಗ್ರಹ