ಬಿಜೆಪಿಯ ಆರೋಪಗಳ ಸ್ಯಾಂಪಲ್ ನೀಡಿದ ಖರ್ಗೆ

0
19

ಬಿಜೆಪಿಯವರ ಹಿಂದಿನ ಎಲ್ಲಾ ಆರೋಪಗಳು ಹೂರಣವಿಲ್ಲದ ಹೊಳಿಗೆಯಂತೆ ಕಳೆದುಹೋದವು: ಬಿಜೆಪಿ ನಾಯಕರು ಉತ್ತರಿಸಲೇಬೇಕಾದ ಕೆಲವು ಪ್ರಶ್ನೆಗಳಿವೆ

ಬೆಂಗಳೂರು: ಇಂದು ಕಲಬುರಗಿಗೆ ಆಗಮಿಸುವ ಕರ್ನಾಟಕ ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸ್ವಾಗತ ಕೋರಿದ್ದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಬಿಜೆಪಿ ನಾಯಕರು ಈ ಹಿಂದೆ ಕಲಬುರಗಿಗೆ ಬಂದಾಗ ಮಾಡಿದ ಆರೋಪಗಳನ್ನು ಬಿಚ್ಚಿಟ್ಟಿದ್ದಾರೆ.

ಬಿಜೆಪಿ ನಾಯಕರೇ ಈ ಹಿಂದೆ ತಾವು ಕಲಬುರಗಿಗೆ ಬಂದಾಗ, ನಿಮ್ಮ ಆರೋಪಗಳ ಸ್ಯಾಂಪಲ್ ಇಂತಿವೆ,

  • ಪ್ರಿಯಾಂಕ್ ಖರ್ಗೆ ಬಿಜೆಪಿ ಅಭ್ಯರ್ಥಿ ಮಣಿಕಾಂಠ ರಾಥೋಡ್ ಕೊಲ್ಲಲು ಪ್ರಯತ್ನಿಸಿದರು. ಈ ಆರೋಪದ ಕತೆ ಏನಾಯಿತು?
  • ಪ್ರಿಯಾಂಕ್ ಖರ್ಗೆ ಸಚಿನ್ ಪಾಂಚಾಲ್ ಸಾವಿಗೆ ಕಾರಣರು. ದಯವಿಟ್ಟು ಈ ಪ್ರಕರಣದ ತನಿಖೆಯ ಬಗ್ಗೆ ಜನರಿಗೆ ವಿವರಿಸಿ.
  • ಈಗ ಹೊಸ ಆರೋಪವಾಗಿ ಅಕ್ರಮ ಮರಳು ಗಣಿಗಾರಿಕೆಯಿಂದ ಯುವಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಹೇಳುತ್ತಿದೀರಿ, ಇದು ಕೂಡ ಸುಳ್ಳು ಎಂದು ಸಾಬೀತಾಗುತ್ತದೆ.

ಬಿಜೆಪಿಯವರ ಹಿಂದಿನ ಎಲ್ಲಾ ಆರೋಪಗಳು ಹೂರಣವಿಲ್ಲದ ಹೊಳಿಗೆಯಂತೆ ಕಳೆದುಹೋದವು.

ಆದರೆ,
ಬಿಜೆಪಿ ನಾಯಕರು ಉತ್ತರಿಸಲೇಬೇಕಾದ ಕೆಲವು ಪ್ರಶ್ನೆಗಳಿವೆ,

  • ಚಿತ್ತಾಪುರ ಕ್ಷೇತ್ರದ ನಿಮ್ಮ ಘನ ಅಭ್ಯರ್ಥಿ ಬಡವರ ಅಕ್ಕಿ ಕದಿಯುವ ಕಸುಬು ಮುಂದುವರೆಸಿರುವುದೇಕೆ?
  • ಕಾಳಗಿಯಲ್ಲಿರುವ ಭೋವಿ ನಿಗಮದ ಹಗರಣದಲ್ಲಿ ಭಾಗಿಯಾಗಿರುವ ಎ2 ಆರೋಪಿ ಯಾರು ಎನ್ನುವುದನ್ನು ವಿವರಿಸುವಿರಾ?
  • ಕೋಲಿ ಸಮುದಾಯಕ್ಕೆ ಎಸ್ ಟಿ ಸ್ಥಾನಮಾನ ನೀಡುವ ಪ್ರಸ್ತಾವನೆಗೆ ನಿಮ್ಮ ಮೋದಿಯವರು ಮನ್ನಣೆ ನೀಡದೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳಿಸಿದ್ದೇಕೆ ಎನ್ನುವುದನ್ನು ಹೇಳುವಿರಾ? ಎಂದು ಪ್ರಶ್ನಿಸಿದ್ದಾರೆ.
Previous articleಹಳ್ಳದ ತಡೆಗೋಡೆ ಪಿಕಪ್ ವಾಹನ ಡಿಕ್ಕಿ ನಾಲ್ವರ ಸಾವು
Next articleಈ ಬಾರಿ RCB ಕಪ್ ಗೆಲ್ಲುವ ನಿರೀಕ್ಷೆ ಇದೆ: ಕುಂಬ್ಳೆ ವಿಶ್ವಾಸ