ಶ್ರೀರಂಗಪಟ್ಟಣ; ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕು ದೊಡ್ಡೇಗೌಡನಕೊಪ್ಪಲು ಗ್ರಾಮದ ಗೌತಮ ಆಶ್ರಮದಲ್ಲಿ ಕೆ ಆರ್ ಎಸ್ ನಿಂದಾ ಹೆಚ್ಚಿನ ನೀರು ಬಿಟ್ಟಿರುವುದರಿಂದ ಆಶ್ರಮ ದ್ವೀಪವಾಗಿ ಮಾರ್ಪಟ್ಟಿದ್ದು ಅಲ್ಲಿ ಸಿಲುಕಿರುವ ಒಬ್ಬರು ಸ್ವಾಮೀಜಿ ಮತ್ತು 02 ಅನುಚರರನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ ಹಾಗೂ ಎಮ್ಇಜಿ ತಂಡ ಸೇರಿ ರಕ್ಷಣೆ ಮಾಡಿ ದಡಕ್ಕೆ ಕರೆತರಲಾಯಿತು ಈ ಕಾರ್ಯಚರಣೆಯು ಮುಖ್ಯ ಅಗ್ನಿಶಾಮಕ ಅಧಿಕಾರಿ ಮೈಸೂರು ವಿಭಾಗದ ಪಿ ಎಸ್ ಜಯರಾಮ್ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಗುರುರಾಜ ಕೆ.ಪಿ , ರಾಘವೇಂದ್ರ ಬಿ.ಎಮ್, ರಮೇಶ್.ಸಿ ರವರ ನೇತೃತ್ವದಲ್ಲಿ ಸುಮಾರು 25 ಜನ ಅಧಿಕಾರಿಯ ಸಿಬ್ಬಂದಿಯವರೊಂದಿಗೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿ ಕಂದಾಯ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಯಿತು.