Home Advertisement
Home ನಮ್ಮ ಜಿಲ್ಲೆ ಚಿಕ್ಕಮಗಳೂರು ನವ ವಿವಾಹಿತೆ ನೇಣಿಗೆ ಶರಣು

ನವ ವಿವಾಹಿತೆ ನೇಣಿಗೆ ಶರಣು

0
68

ಚಿಕ್ಕಮಗಳೂರು: ವಿವಾಹವಾಗಿ ಕೇವಲ ಒಂದೇ ತಿಂಗಳಿನಲ್ಲಿ ತವರು ಮನೆಗೆ ಬಂದು ನವ ವಿವಾಹಿತೆ ನೇಣಿಗೆ ಶರಣಾದ ಘಟನೆ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಸಮೀಪದ ಗುಳ್ಳದಮನೆ ಗ್ರಾಮದಲ್ಲಿ ನಡೆದಿದೆ.
ಅವಳು ಬಿಂದು, ಒಂದು ತಿಂಗಳ ಹಿಂದಷ್ಟೆ ಹೊಸದುರ್ಗ ಮೂಲದ ಯುವಕನ ಜೊತೆ ಹಸೆಮಣೆ ಏರಿದ್ದಳು, ಊರಿನಲ್ಲಿ ಹಬ್ಬಕ್ಕೆಂದು ಮೊನ್ನೆಯಷ್ಟೆ ಬಂದಿದ್ದಳು ಗಂಡನ ಜೊತೆಯಲ್ಲಿ ಆಗಮಿಸಿದ್ದ ಅವಳು ಮನೆಯಲ್ಲಿ ಎಲ್ಲರೂ ಇರುವಾಗಲೇ ಸ್ನಾನದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ