ಬಳ್ಳಾರಿ: ತುಂಗಭದ್ರಾ ಜಲಾಶಯದಲ್ಲಿ ಹರಿಯುವ ನೀರಿನಲ್ಲೇ ೧೯ ನೇ ಕ್ರಸ್ಟ್ ಅಳವಡಿಸುವ ಸವಾಲಿನ ಕಾರ್ಯ ಆರಂಭವಾಯಿತು.
ತೋರಣಗಲ್ ನ ಜೆಎಸ್ ಡಬ್ಲ್ಯೂ ಕಂಪನಿಯಲ್ಲಿ ನಿರ್ಮಾಣಗೊಂಡ ಬೃಹತ್ ಗೇಟ್ ಗಳನ್ನು ಗುರುವಾರ ಬೆಳಗ್ಗೆ ಜಲಾಶಯಕ್ಕೆ ಸಾಗಿಸಲಾಯಿತು.
ಎರಡು ಗೇಟ್ಗಳನ್ನು ಹೊತ್ತ ಲಾರಿ ಜಲಾಶಯದ ಕೊಚ್ಚಿ ಹೋದ ೧೯ನೇ ಕ್ರಸ್ಟ್ ಗೇಟ ಗಳಿ ಬಂದಿಳಿಯಿತು. ನಿನ್ನೆಯೇ ಗೇಟ್ ಅಳವಡಿಕೆ ಪೂರ್ವಸಿದ್ಧತಾ ಕಾರ್ಯ ಮುಗಿದಿದ್ದು ಗೇಟ ಅಳವಡಿಕೆಗೆ ಟ್ರ್ಯಾಕ್ ನಿರ್ಮಾಣವೂ ಮುಗಿದಿದೆ
ಹೀಗಾಗಿ ಗುರುವಾರ ಗೇಟ ಅಳವಡಿಕೆ ಸಹಾಸ ಆರಂಭಿಸಲಾಗಿದೆ.