ಕಿತ್ತೂರು ಉತ್ಸವ ಜ್ಯೋತಿಗೆ ಯರಗಟ್ಟಿಯಲ್ಲಿ ಅದ್ದೂರಿ ಸ್ವಾಗತ

0
6

ಯರಗಟ್ಟಿ: ಇದೇ 23ರಿಂದ 25ರ ವರೆಗೆ ಜರುಗುವ ಕಿತ್ತೂರು 200ನೇ ವಿಜಯೋತ್ಸವ ಅಂಗವಾಗಿ ಇಂದು ಯರಗಟ್ಟಿ ಪಟ್ಟಣದ ಸಂಗೋಳ್ಳಿ ರಾಯಣ್ಣನ ವೃತ್ತದಲ್ಲಿ ಕಿತ್ತೂರು ಉತ್ಸವದ ಜ್ಯೋತಿಯನ್ನು ಕುಂಬ ಮೇಳದೊಂದಿಗೆ ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು.

ವೀರ ಜ್ಯೋತಿಗೆ ಯರಗಟ್ಟಿ ತಾಲೂಕಾ ತಹಶೀಲ್ದಾರ ಎಮ್ ಎನ್ ಮಠದ ಅವರು ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಿಕೆಪಿಎಸ್ ಅಧ್ಯಕ್ಷರಾದ ಅಜೀತಕುಮಾರ ದೇಸಾಯಿ,ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ದೇಸಾಯಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನವರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ ಎನ್ ತಹಶೀಲ್ದಾರ, ಮತ್ತು ನಾಮ ನಿರ್ದೇಶಿತ ಸದಸ್ಯರು ತಾಲೂಕು ಕರವೇ ಅಧ್ಯಕ್ಷ ಡಿ ಕೆ ರಫಿಕ್, ತಾಲೂಕು ಕಸಾಪ ಅಧ್ಯಕ್ಷ ತಮ್ಮಣ್ಣ ಕಾಮಣ್ಣವರ, ಪಟ್ಟಣದ ಗುರು ಹಿರಿಯರು ಹಲವಾರು ಸಂಘಟನೆಯವರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Previous articleಕೃಷ್ಣಾ ನದಿಗೆ ಸ್ನಾನಕ್ಕೆ ಹೋಗಿದ್ದ ಇಬ್ಬರು ನಾಪತ್ತೆ
Next articleಹುಸಿ ಬಾಂಬ್ ಬೆದರಿಕೆ ವೈಮಾನಿಕ ರಂಗಕ್ಕೆ ನಷ್ಟ