ಕಾಫಿ ಗಿಡಗಳ ಮಧ್ಯೆ ಗಾಂಜಾ

0
15
ಬಂಧನ

ಚಿಕ್ಕಮಗಳೂರು: ಕಾಫಿ ತೋಟವೊಂದರಲ್ಲಿ ಕಾಫಿಗಿಡಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆದ ಆರೋಪದ ಮೇಲೆ ತೋಟದ ಮಾಲಕನನ್ನು ಸಿಇಎನ್ ಪೊಲೀಸರು ಬಂಧಿಸಿರುವ ಘಟನೆ ಬುಧವಾರ ಸಂಜೆ ತಾಲೂಕಿನ ಕೆಳಹೊಲಗದ್ದೆ ಗ್ರಾಮದಲ್ಲಿ ನಡೆದಿದೆ.
ಬಂಧಿತ ಅರೋಪಿಯನ್ನು ಕೆಳಹೊಲಗದ್ದೆ ಗ್ರಾಮದ ನಿವಾಸಿ ರಾಜೇಂದ್ರ ಎಂದು ಗುರುತಿಸಲಾಗಿದೆ.
ಆರೋಪಿ ರಾಜೇಂದ್ರ ಕಾಫಿ‌ತೋಟದ ಕಾಫಿ ಗಿಡಗಳ ಮಧ್ಯೆ ಕೆಲ ತಿಂಗಳುಗಳ ಹಿಂದೆ ಗಾಂಜಾ ಗಿಡಗಳನ್ನು‌ ಬೆಳೆದಿದ್ದ. ಬುಧವಾರ ಸಂಜೆ ಖಚಿತ ಮಾಹಿತಿ ಮೇರೆಗೆ ಸಿಇಎನ್
ಪೊಲೀಸರು ಕಾಫಿ ತೋಟದ ಮೇಲೆ ದಿಡೀರ್ ದಾಳಿ ನಡೆಸಿದಾಗ ತೋಟದಲ್ಲಿ‌ ಗಾಂಜಾ ಗಿಡಗಳು ಪತ್ತೆಯಾಗಿವೆ. ದಾಳಿ ವೇಳೆ ೧೦೦ ಗ್ರಾಂ. ಹಸಿ ಗಾಂಜ ವನ್ನು ಪೊಲೀಸರು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ.

Previous articleಪೊಲೀಸ್ ಅಂದ್ರೆ ಭಯ ಅಲ್ಲ, ಭರವಸೆ: 10 ಅಡಿಯ ನೀರಿನ‌ ಸಂಪ್​ಗೆ ಬಿದ್ದ ಮಗು ರಕ್ಷಿಸಿದ ಪೊಲೀಸ್
Next articleಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ