ಐರ್ಲೆಂಡ್‌ನಲ್ಲಿ ಕುಷ್ಟಗಿ ಯುವಕ ನಿಧನ

0
10

ಕುಷ್ಟಗಿ: ತಾಲೂಕು ಪಂಚಾಯಿತಿ ನಿವೃತ್ತ ವ್ಯವಸ್ಥಾಪಕ ರೇವಣ್ಣ ನಾಡಗೌಡ ದಂಪತಿಯ ದ್ವಿತೀಯ ಪುತ್ರ ಶ್ರೀಧರ ನಾಡಗೌಡ ಐರ್ಲೆಂಡ್‌ನಲ್ಲಿ ಹೃದಯಾಘಾತದಿಂದ
ಸಾವನಪ್ಪಿದ್ದಾನೆ.
ಐರ್ಲೆಂಡ್‌ನಲ್ಲಿ ಉದ್ಯೋಗದಲ್ಲಿದ್ದ ಶ್ರೀಧರ ವಾರದ ಹಿಂದೆಯೇ ಮೃತಪಟ್ಟಿದ್ದು, ಮೃತದೇಹದ ನಿರೀಕ್ಷೆಯಲ್ಲಿ ಹೆತ್ತವರು ಹಗಲು ರಾತ್ರಿ ಕಣ್ಣೀರಿಡುತ್ತಿದ್ದಾರೆ. ರೇವಣ್ಣ ನಾಡಗೌಡ ದಂಪತಿಯ ದ್ವಿತೀಯ ಪುತ್ರ ಕಳೆದ ಜೂನ್‌ನಲ್ಲಿ ಐರ್ಲೆಂಡ್‌ಗೆ ತೆರಳಿದ್ದ. ತುಮಕೂರಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ನಂತರ ಡಬ್ಲಿನ್‌ನಲ್ಲಿ ಉನ್ನತ ವ್ಯಾಸಂಗ ಮುಗಿಸಿ ನಂತರ ಅದೇ ದೇಶದ ಗಾಲ್ವೆಯಲ್ಲಿನ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಕಂಡುಕೊಂಡಿದ್ದ ಕಂಪನಿಯ ಮೂಲಕ ಹೆತ್ತವರಿಗೆ ವಿಷಯ ತಿಳಿದಿದೆ. ಮೃತದೇಹ ಶುಕ್ರವಾರದ ವೇಳೆಗೆ ಬೆಂಗಳೂರು ತಲುಪುವ ನಿರೀಕ್ಷೆ ಇದೆ. ಇನ್ನೊಬ್ಬ ಹಿರಿಯ ಪುತ್ರ ಶ್ರೀಕಾಂತ ನಾಡಗೌಡ ಜರ್ಮನಿಯಲ್ಲಿ ಉದ್ಯೋಗಿಯಾಗಿದ್ದಾನೆ.

Previous articleಸಂಸ್ಕೃತ ಸಾಹಿತ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ
Next articleವೀರವನಿತೆಗೆ ತೂಕ ತಪ್ಪಿಸಿದ ಒಲಿಂಪಿಕ್ಸ್