ಈಜಲು ಹೋಗಿದ್ದ ತಂದೆ ಮಗ ಸೇರಿ ಮೂವರು ಸಾವು

ಕೋಲಾರ: ಕೆರೆಯಲ್ಲಿ ಈಜಲು ಹೋಗಿದ್ದ ತಂದೆ ಮಗ ಸೇರಿ ಮೂವರ ಮೃತಪಟ್ಟ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದಿದೆ.
ರಮೇಶ್ (40) ಮತ್ತು ಅವರ ಪುತ್ರ ಅಗಸ್ತ್ಯ (12), ಸ್ನೇಹಿತ ಶರಣ್ (15) ಮೃತಪಟ್ಟಿದ್ದಾರೆ. ವಡ್ಡರಹಳ್ಳಿ ಹೊರ ವಲಯದಲ್ಲಿರುವ ಬೂಡದ ಮಿಟ್ಟೆ ಕೆರೆಯಲ್ಲಿ ಈಜಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನೆಡೆದಿದೆ.
ಈ ಕುರಿತು ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.