ಹುಬ್ಬಳ್ಳಿ: ಗೋಕುಲ ರಸ್ತಯ ಮೊರಾರ್ಜಿ ನಗರ ನಿವಾಸಿಗಳ ನಿದ್ದೆಗೆಡಿಸಿದ್ದ ಸುಮಾರು 6 ಅಡಿ ಉದ್ದದ ಇಂಡಿಯನ್ ರ್ಯಾಟ್ ಸ್ನೇಕ್ ಅನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಡುವಲ್ಲಿ ಉರಗ ಪ್ರೇಮಿ ರಮೇಶ ಕಾಳೆ ಯಶಸ್ವಿಯಾಗಿದ್ದಾರೆ.
ಕಳೆದ 3-4 ದಿನಗಳಿಂದ ಮೊರಾರ್ಜಿ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ಬೃಹತ್ ಗಾತ್ರದ ಕೆರೆ ಹಾವಿನಿಂದ ಜನ ಆತಂಕಕ್ಕೆ ಒಳಗಾಗಿದ್ದರು. ಹಾವನ್ನು ಹಿಡಿಯಲು ಈ ಹಿಂದೆ ಪ್ರಯತ್ನಿಸಿದ್ದರೂ ಕಾರ್ಯಾಚರಣೆ ವಿಫಲವಾಗಿತ್ತು. ಗುರುವಾರ ಹಾವು ಪ್ರತ್ಯಕ್ಷವಾದ ತಕ್ಷಣ, ಸಾರ್ವಜನಿಕರು ಸ್ನೇಕ್ ರಮೇಶ್ ಅವರಿಗೆ ದೂರವಾಣಿ ಕರೆ ಮಾಡಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ರಮೇಶ, ಗಟಾರಿನಲ್ಲಿ ಅಡಗಿ ಕುಳಿತಿದ್ದ ಹಾವನ್ನು ಬರೀ ಕೈಯಲ್ಲೇ ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಡ್ಡಿದ್ದಾರೆ.
ಇದರಿಂದ ಮೊರಾರ್ಜಿ ನಗರದ ಜನ ನಿಟ್ಟುಸಿರು ಬಿಡುವಂತಾಗಿದೆ. ಸ್ನೇಕ್ ರಮೇಶ ಈವರೆಗೂ 2,500ಕ್ಕೂ ಅಧಿಕ ಹಾವುಗಳನ್ನು ಸುರಕ್ಷಿತ ಸ್ಥಳಗಳಿಗೆ ಬಿಟ್ಟಿದ್ದಾರೆ. ಸಮಸ್ಯೆಗೊಳಗಾದವರು ದೂ.ಸಂ. 96864 28543 ಅಥವಾ 79754 38568ಗೆರ ಕರೆ ಮಾಡಬಹುದು.