ಬೀದರ್: ಕೋಟೆ ನಗರದಲ್ಲಿನ ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ವಿಮಾನಗಳು ಇಲ್ಲಿಯ ಐತಿಹಾಸಿಕ ಬೀದರ್ ಕೋಟೆಯ ವಿಶಾಲ ಮೈದಾನದ ಬಾನಂಗಳದಲ್ಲಿ ಶುಕ್ರವಾರ ಪ್ರಸ್ತುತಪಡಿಸಿದ ರೋಮಾಂಚನಕಾರಿ ಹಾಗೂ ಸಾಹಸಮಯ ವೈಮಾನಿಕ ಪ್ರದರ್ಶನ ನೋಡಿ ಜನರು ನಿಬ್ಬೆರಗಾದರು. ಸೂರ್ಯ ಕಿರಣ್ ವಿಮಾನಗಳ ಯುವ ಪೈಲಟ್ರ ಪಡೆ ತನ್ನ ವೈಮಾನಿಕ ಹಾರಾಟದ ಕಲಾ ಕೌಶಲ್ಯವನ್ನು ಪ್ರದರ್ಶಿಸುವುದರ ಜೊತೆ ಜೊತೆಗೆ ದೇಶ ಶಕ್ತಿ, ಒಗ್ಗಟ್ಟು, ಪ್ರೀತಿ, ಪ್ರೇಮ, ವಾತ್ಸಲ್ಯದ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಒಗ್ಗಟ್ಟಿನ ಮಹತ್ವದ ಸಂದೇಶ ಸಾರಿತು.