ಅಕ್ರಮವಾಗಿ ಶಾಲೆ ಕಬ್ಜ: ಉಪಮುಖ್ಯಮಂತ್ರಿಗೆ ಮಕ್ಕಳ ದೂರು

0
40

ಬೆಂಗಳೂರು: ಅಕ್ರಮವಾಗಿ ಶಾಲೆಯನ್ನು ಕಬ್ಜ ಮಾಡಿಕೊಂಡು ಶಾಲೆ ಅವರಣದಿಂದ ಮಕ್ಕಳನ್ನು ಹೊರಗೆ ಹಾಕಿದ್ದಾರೆಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರಿಗೆ ಶಾಲಾ ಮಕ್ಕಳು ದೂರು ಸಲ್ಲಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ವಿದ್ಯಾರಣ್ಯಪುರದ ಎಂ.ಎಸ್ ಪಾಳ್ಯದಲ್ಲಿರುವ ಶ್ರೀ ಶಾರದಾ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ನನ್ನನ್ನು ನಿವಾಸದಲ್ಲಿ ಭೇಟಿಯಾಗಿ, ಸ್ಥಳೀಯರು ಒಬ್ಬರು ಅಕ್ರಮವಾಗಿ ಶಾಲೆಯನ್ನು ಕಬ್ಜ ಮಾಡಿಕೊಂಡು ತಮ್ಮನ್ನು ಶಾಲೆ ಅವರಣದಿಂದ ಹೊರಗೆ ಹಾಕಿದ್ದಾರೆಂದು ದೂರಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ಹಾಗೂ ಡಿಡಿಪಿಐಗಳ ಜೊತೆಗೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದೇನೆ. ಅವಶ್ಯಕತೆ ಇದ್ದರೆ ನಾನೇ ಭೇಟಿ ನೀಡಿ ಸಮಸ್ಯೆ ಪರಿಹರಿಸಿಕೊಡುತ್ತೇನೆ ಎಂಬ ಭರವಸೆ ನೀಡಿದ್ದೇನೆ. ಎಲ್ಲರೂ ಕಾನೂನಿಗೆ ಗೌರವ ನೀಡಬೇಕು ಅದು ಯಾರೇ ಆಗಿರಲಿ ಎಂದಿದ್ದಾರೆ.

Previous articleಗೃಹಲಕ್ಷ್ಮಿ: ಕಾರ್ಯಕರ್ತರಿಗೆ ಜಾಕ್ ಪಾಟ್- ರಾಜ್ಯದ ಮಹಿಳೆಯರಿಗೆ ಮಡ್ ಪಾಟ್
Next articleಐತಿಹಾಸಿಕ ಲಕ್ಕುಂಡಿ ಉತ್ಖನನಕ್ಕೆ ಸಿದ್ಧರಾಮಯ್ಯ ಚಾಲನೆ