ಹ್ಯಾಟ್ರಿಕ್ ಗೆಲುವು ನಿಶ್ಚಿತ: ಅಬ್ಬಯ್ಯ ವಿಶ್ವಾಸ

0
26

ಹುಬ್ಬಳ್ಳಿ: ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ ಅವರು, ಬುಧವಾರ ಕುಟುಂಬ ಸಮೇತರಾಗಿ ಸಂತೋಷ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 18ರಲ್ಲಿ ಮತದಾನ ಮಾಡಿದರು. ತಾಯಿ ಧನಲಕ್ಷ್ಮಿ ಮತ್ತು ಪತ್ನಿ ಬೃಂದಾ ಅವರೊಂದಿಗೆ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ ಅಬ್ಬಯ್ಯ, ನಂತರ ಗೆಲುವಿನ ಸಂಕೇತ ಪ್ರದರ್ಶಿಸಿದರು.
ನಂತರ ಮಾತನಾಡಿದ ಅವರು, ಕ್ಷೇತ್ರದಾದ್ಯಂತ ಬುರುಸಿನ ಮತದಾನ ನಡಿಯುತ್ತಿದೆ. ಮತದಾರರು ಬಿರು ಬಿಸಿಲನ್ನು ಲೆಕ್ಕಿಸದೇ ಸೆರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಎಲ್ಲೆಡೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಅತೀ ಹೆಚ್ಚು ಮತಗಳ ಅಂತರದಿಂದ ಹ್ಯಾಟ್ರಿಕ್ ಗಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

Previous articleಎಸ್ ಜೆ ಕೋಟೆಯಲ್ಲಿ ಕೈ – ಕಮಲ ಮಾರಾಮಾರಿ
Next articleಮಸ್ಕಿಯಲ್ಲಿ ತಡವಾಗಿ ಮತದಾನ ಆರಂಭ