ವಿವಿಧ ಪುಸ್ತಕ, ಲೋಕಾರ್ಪಣೆ

0
17

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನ ತ್ರಿಪುರವಾಸಿನಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸುವರ್ಣ ಸಂಭ್ರಮ ಸಮ್ಮೇಳನದಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆ' ಸಂಪಾದಕರಾದ ಮಹಾಬಲ ಸೀತಾಳಭಾವಿ ಅವರು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದಚಾಣಕ್ಯ ನೀತಿ’ ಪುಸ್ತಕ ಸೇರಿದಂತೆ ಹಲವು ಲೇಖಕರ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಲೇಖಕ ಸ್ವಾಮಿ ಶಿವಪ್ರಕಾಶಾನಂದ ಸರಸ್ವತೀ ಅವರ ವೇದಾಂತ ತತ್ವ ಚಿಂತನ' ಕೃತಿ, ಛಾಯಾಪತಿ ಕೆ.ಎನ್ ಅವರಸ್ವಾತಂತ್ರ ಹೋರಾಟದಲ್ಲಿ ಬ್ರಾಹ್ಮಣರ ಪಾತ್ರ’, ಸುರೇಶ್ ಮೂನ ಅವರ ಮರೆಯಲಾಗದ ಮಹನೀಯರು', ಹಾನಗಲ್ ವಿರೂಪಕ್ಷ ಶಾಸ್ತ್ರಿ ಅವರಧ್ಯಾನಬಿಂದೂಪನಿಷದರ್ಥವು’ ಸೇರಿದಂತೆ ಇತರೆ ಪುಸ್ತಕಗಳು ಲೋಕಾರ್ಪಣೆಗೊಂಡವು. ಸಮ್ಮೇಳನದ ಸಭಾಂಗಣದ ಹೊರಗೆ ಆಯೋಜಿಸಲಾಗಿದ್ದ ವಾಣಿಜ್ಯ ಮೇಳ, ಆಹಾರ ಮೇಳವನ್ನು ಇದೇ ಸಂದರ್ಭದಲ್ಲಿ ಉದ್ಘಾಟನೆ ಮಾಡಲಾಯಿತು.

Previous articleಸಮಸ್ಯೆ ಮೆಟ್ಟಿನಿಂತರೆ ತೊಂದರೆ ಇಲ್ಲ: ಹಾರನಹಳ್ಳಿ
Next articleಎಲ್ಲಾ ಸಮಾಜದ ಉದ್ದೇಶ ಧರ್ಮ ರಕ್ಷಣೆ