Home Advertisement
Home ತಾಜಾ ಸುದ್ದಿ ಮಿಚಾಂಗ್ ಚಂಡಮಾರುತ: ಸಂಕಷ್ಟ ಪೀಡಿತರಿಗೆ ಬೆಳಗಾವಿಯಿಂದ ನೆರವು

ಮಿಚಾಂಗ್ ಚಂಡಮಾರುತ: ಸಂಕಷ್ಟ ಪೀಡಿತರಿಗೆ ಬೆಳಗಾವಿಯಿಂದ ನೆರವು

0
98

ಬೆಳಗಾವಿ: ಭೀಕರ ಮಿಚಾಂಗ್ ಚಂಡಮಾರುತದ ಆರ್ಭಟಕ್ಕೆ ನಲುಗಿ ಸಂಕಷ್ಟ ಪೀಡಿತವಾಗಿರುವ ತಮಿಳುನಾಡಿನ ಜನರ ಹಾಹಾಕಾರ ಪರಿಸ್ಥಿತಿಗೆ ಸ್ಪಂದಿಸಲು ಅಲ್ಲಿನ ಸಂಕಷ್ಟಿತ ಜನರ ನೆರವಿಗೆ ಧಾವಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಇಂದು ಬೆಳಗಾವಿಯ ಬಿಜೆಪಿ ಕಛೇರಿಯಿಂದ ಆಹಾರ ಸಾಮಗ್ರಿಗಳು ಹಾಗೂ ಅಗತ್ಯ ದಿನಬಳಕೆ ವಸ್ತುಗಳನ್ನು ತಮಿಳುನಾಡಿಗೆ ರವಾನಿಸುವ ವಾಹನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ನಗರ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ಅನಿಲ್ ಬೆನಕೆ, ಶಾಸಕ ಎಸ್.ಆರ್.ವಿಶ್ವನಾಥ್,ಸತೀಶ್ ರೆಡ್ಡಿ, ಪ್ರಭು ಚೌಹಾಣ್, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.