Home Advertisement
Home ತಾಜಾ ಸುದ್ದಿ ಪಂಚಮಸಾಲಿ ಹೋರಾಟ ಬೆಂಗಳೂರಿಗೆ ಶಿಫ್ಟ್‌

ಪಂಚಮಸಾಲಿ ಹೋರಾಟ ಬೆಂಗಳೂರಿಗೆ ಶಿಫ್ಟ್‌

0
141
ಪಂಚಮಸಾಲಿ

ಹಾವೇರಿ: ಶಿಗ್ಗಾವಿಯಲ್ಲಿ ನಡೆಯುತ್ತಿದ್ದ ಪಂಚಮಸಾಲಿ ಹೋರಾಟ ನಾಳೆಯಿಂದ ಬೆಂಗಳೂರಿಗೆ ಶಿಫ್ಟ್‌ ಆಗಲಿದೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ‌ ಹೇಳಿದ್ದಾರೆ. ನಾಳೆಯಿಂದಲೇ ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಹೋರಾಟ ಆರಂಭವಾಗಲಿದ್ದು, ನಿರಂತರವಾಗಿ ಬೆಂಗಳೂರಿನಲ್ಲಿ ಹೋರಾಟ ನಡೆಯಲಿದೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಇಂದು ಶಿಗ್ಗಾವಿಯಲ್ಲಿ ಹೆದ್ದಾರಿ ತಡೆ ನಡೆಸಿ ಧರಣಿ ಆರಂಭಿಸಿದ್ದ ಹೋರಾಟಗಾರರು ಧರಣಿ ಅಂತ್ಯಗೊಳಿಸಿದ್ದು, ಮತ್ತೆ ವಾಹನ ಸಂಚಾರ ಆರಂಭವಾಗಿದೆ.