ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾದ ಸಮಯ

0
24

ಬೆಂಗಳೂರು: ನಾವೆಲ್ಲರೂ ಈ ಸಮಯದಲ್ಲಿ ತ್ಯಾಗ ಮಾಡಬೇಕು ಎಂದು ಕರ್ನಾಟಕದ ಕಾಂಗ್ರೆಸ್ ಹಿರಿಯ ಶಾಸಕ ಪರಮೇಶ್ವರ್ ಹೇಳಿದರು, ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಯಾರಿಗೂ ಉಪಮುಖ್ಯಮಂತ್ರಿ ಸ್ಥಾನ ಕೊಡಿ ಅಂತ ಮಾತಾಡಿಲ್ಲ. ನಾವು ಜನರಿಗೆ ಏನು ಭರವಸೆ ನೀಡಿದ್ದೇವೆ ಅದನ್ನ ಇಡೇರಿಸಬೇಕು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾದ ಸಮಯ ಇದು. ನಮ್ಮ ವೈಯಕ್ತಿಕ ಆಕಾಂಕ್ಷೆಗಳನ್ನು ನಾವು ಮರೆಯಬೇಕಾದ ಸಮಯ ಇದು. ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಬೇಕಾದ ಸಮಯ ಇದು…ನಾನು ಹೇಳಿದಂತೆ ಪಕ್ಷವೇ ಸರ್ವಶ್ರೇಷ್ಠ. ಆದ್ದರಿಂದ, ನಾವು ಎದುರು ನೋಡಬೇಕಾಗಿದೆ. 2024ರ ಲೋಕಸಭೆ ಚುನಾವಣೆ ಇದೆ. ಆ ವಿಷಯಗಳನ್ನೂ ನಾವು ಪರಿಗಣಿಸಬೇಕು ಎಂದು ಹೇಳಿದರು.

Previous articleಕಂಠೀರವ ಸ್ಟೇಡಿಯಂಗೆ ಡಿಕೆಶಿ ಭೇಟಿ : ನಾಳೆ ಸಿಎಂ, ಡಿಸಿಎಂ ಪದಗ್ರಹಣ
Next articleಬಿಜೆಪಿ-ಹಿಂದೂ ಕಾರ್ಯಕರ್ತರು ಬೇರೆಯಲ್ಲ