Home Advertisement
Home ತಾಜಾ ಸುದ್ದಿ ಕುತೂಹಲ ಕೆರಳಿಸಿದ ಎಚ್ ಡಿ ದೇವೇಗೌಡರ ಸುದ್ದಿಗೋಷ್ಠಿ

ಕುತೂಹಲ ಕೆರಳಿಸಿದ ಎಚ್ ಡಿ ದೇವೇಗೌಡರ ಸುದ್ದಿಗೋಷ್ಠಿ

0
125

ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಇಂದು ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ. ಮೈತ್ರಿ ಅಥವಾ ಹೊಂದಾಣಿಕೆಯ ಬಗ್ಗೆ ದಳದ ನಿರ್ಧಾರದ ಕುರಿತಾಗಿ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಮೈತ್ರಿ ಕುರಿತಾಗಿ ಪಕ್ಷದ ನಿಲುವು ಏನು ಎಂಬುದನ್ನು ಎಚ್ ಡಿ ದೇವೇಗೌಡರು ಮಾತನಾಡುವ ಸಾಧ್ಯತೆ ಇದೆ. ಅಲ್ಲದೆ ಪಕ್ಷ ಸಂಘಟನೆಗೆ ಮುಂದಿನ ದಿನಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ದೇವೇಗೌಡರು ತಿಳಿಸುವ ಸಾಧ್ಯತೆ ಇದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಅವರ ಇಂದಿನ ಪತ್ರಿಕಾಗೋಷ್ಠಿ ಕುತೂಹಲಕ್ಕೆ ಕಾರಣವಾಗಿದೆ.