ಕಪ್ಪುಹಣ ವಾಪಸ್ ತರುತ್ತೇವೆ ಎಂದವರು ತನ್ನದೇ ಬ್ಯಾಂಕ್ನ ದತ್ತಾಂಶ ಮುಚ್ಚಿಟ್ಟಿದ್ದಕ್ಕೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಬಯಲಾಗಲಿದೆ ನರೇಂದ್ರ ಮೋದಿಯ ‘ದೇಣಿಗೆ ವ್ಯವಹಾರ’! 100 ದಿನಗಳಲ್ಲಿ ಸ್ವಿಸ್ ಬ್ಯಾಂಕ್ನಲ್ಲಿರುವ ಕಪ್ಪುಹಣ ವಾಪಸ್ ತರುತ್ತೇವೆ ಎಂದು ಅಧಿಕಾರಕ್ಕೆ ಬಂದ ಸರ್ಕಾರ ತನ್ನದೇ ಬ್ಯಾಂಕ್ನ ದತ್ತಾಂಶ ಮುಚ್ಚಿಟ್ಟಿದ್ದಕ್ಕೆ, ಎಲೆಕ್ಟೋರಲ್ ಬಾಂಡ್ಗಳು ಭಾರತೀಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣ ಎಂದು ಸಾಬೀತುಪಡಿಸಲಿದೆ. ದೇಣಿಗೆ ನೀಡುವವರ ಮೇಲೆ ಆಶೀರ್ವಾದದ ಸುರಿಮಳೆ ಮತ್ತು ಸಾರ್ವಜನಿಕರ ಮೇಲೆ ತೆರಿಗೆ ಹೊರೆ, ಇದು ಬಿಜೆಪಿಯ ಮೋದಿ ಸರ್ಕಾರ ಎಂದು ಬರೆದುಕೊಂಡಿದ್ದಾರೆ.