ಇಂದು ಸವದತ್ತಿ ಯಲ್ಲಮ್ಮ ಜಾತ್ರೆ

0
151

ಉಗರಗೋಳ(ಬೆಳಗಾವಿ): ರಾಜ್ಯದ ಬೃಹತ್ ಜಾತ್ರೆಗಳಲ್ಲಿ ಒಂದಾಗಿರುವ ಸವದತ್ತಿ ಯಲ್ಲಮ್ಮನ ಜಾತ್ರೆ ಯಲ್ಲಮ್ಮನಗುಡ್ಡದಲ್ಲಿ ಭರತ ಹುಣ್ಣಿಮೆಯ ದಿನವಾದ ಬುಧವಾರ ನಡೆಯಲಿದೆ.
ಈ ಜಾತ್ರೆಗೆ ಕರ್ನಾಟಕ, ಮಹಾರಾಷ್ಟç, ಗೋವಾ ಮೊದಲಾದ ರಾಜ್ಯಗಳಿಂದ ೨೦ ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ. ಮಂಗಳವಾರ ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತರ ದಂಡು ಯಲ್ಲಮ್ಮನ ಸನ್ನಿಧಿಗೆ ಹರಿದು ಬರುತ್ತಿದೆ. ಬುಧವಾರ ನಸುಕಿನ ವೇಳೆಗೆ ಇಡೀ ಗುಡ್ಡದ ಪರಿಸರ ಭಕ್ತ ಸಾಗರದಿಂದ ತುಂಬಿ ತುಳುಕಲಿದೆ.