ಹಾವೇರಿ: ಜಿಲ್ಲಾ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಪರಿಶೀಲಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಜೊತೆ ಸಿಎಂ ಮಾತುಕತೆ ನಡೆಸಿದರು. ರೋಗಿಗಳ ಸಮಸ್ಯೆ ಆಲಿಸಿದರು. ಈ ವೇಳೆ ಮದ್ಯ ನಿಷೇಧ ಮಾಡುವಂತೆ ಸಿಎಂಗೆ ಕಬ್ಬೂರಿನ ರುಕ್ಮೀಣಿಬಾಯಿ ಮಹಿಳೆ ಮನವಿ ಮಾಡಿದರು. ಕುಡಿಯುವುದರಿಂದ ಜೀವನ ಹಾಳಾಗುತ್ತದೆ. ಹೀಗಾಗಿ ಕುಡಿತ ಬಂದ್ ಮಾಡಿಸುವಂತೆ ಸಿಎಂಗೆ ಮನವಿ ನಾವು ಅದಕ್ಕಾಗಿಯೆ ಇದ್ದೇವೆ, ಚಿಂತೆ ಮಾಡಬೇಡ ಎಂದು ಸಿಎಂ ಅಭಯ ನೀಡಿದರು.