ಬೆಳಗಾವಿಯಲ್ಲಿ ಮತ್ತೆ ಚಿರತೆ: ವಿಡಿಯೋ ವೈರಲ್‌

0
7

ಬೆಳಗಾವಿ: ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದರಿಂದ ಸಾರ್ವಜನಿಕರ ಹಾಗೂ ಅರಣ್ಯ ಅಧಿಕಾರಿಗಳ ನಿದ್ದೆಗೆಡಿಸಿದೆ. ಆದರೆ ಈಗ ಶಿವಾಪೂರ(ಹ) ಗ್ರಾಮದ ಹೊರವಲಯದ ವ್ಯಾಪ್ತಿಯ ಕಿತ್ತೂರ ಎಂಬುವವರ ತೋಟದಲ್ಲಿ ಮಂಗಳವಾರ ಮಧ್ಯಾಹ್ನ ಚಿರತೆಯ ಪ್ರತ್ಯಕ್ಷವಾಗಿದೆ ಎಂದು ಹೇಳಲಾಗಿದೆ ಅಂತಹ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದರಿಂದ ಜನರಲ್ಲಿ ಆತಂಕ ಮೂಡಿಸಿದೆ.
ವಿಡಿಯೋ ದೃಶ್ಯಾವಗಳಿಗಳನ್ನು ವೀಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯ ತಹಶೀಲ್ದಾರ್, ಪೊಲೀಸ್ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ ವೇಳೆ ಗದ್ದೆಯಲ್ಲಿ ಮೂಡಿದ ಹೆಜ್ಜೆ ಗುರುತುಗಳು ಚಿರತೆಯದಲ್ಲ ಎಂದು ಅರಣ್ಯ ಅಧಿಕಾರಿ ಸಂಜು ಸವಸುದ್ದಿ ತಿಳಿಸಿದ್ದಾರೆ.
ಆದರೆ ವಿಡಿಯೋ ನೋಡಿದ ಸ್ಥಳೀಯ ಸಾರ್ವಜನಿಕರು ಆತಂಕಕ್ಕೀಡಾಗಿದ್ದರಿಂದ ಆ. 9ರಂದು ಒಂದು ದಿನದ ಮಟ್ಟಿಗೆ ಜಾಗೃತಿವಹಿಸಲು ಸ್ಥಳೀಯ ಅಧಿಕಾರಿಗಳಿಗೆ ತಹಶೀಲ್ದಾರ್ ಶಿವಾನಂದ ಬಬಲಿ ಸೂಚನೆ ನೀಡಿದ್ದಾರೆ. ಮುಂಜಾಗೃತ ಕ್ರಮವಾಗಿ ಸ್ಥಳೀಯ ಗ್ರಾಪಂದಿಂದ ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರಲು ಡಂಗುರ ಸಾರುವ ಮೂಲಕ ಒಬ್ಬಂಟಿಯಾಗಿ ರಾತ್ರಿ ವೇಳೆ ಹಾಗೂ ಗದ್ದೆಗಳ ಕಡೆಗೆ ಹೋಗದಂತೆ ತಿಳಿಸಿದ್ದಾರೆ.

Previous articleಶಿಷ್ಟಾಚಾರ ಉಲ್ಲಂಘನೆ: ಶಾಸಕರಿಂದ ದೂರು
Next articleನಮ್ಮವರಿಗೆ ನಾವೇ ವಿರೋಧಿಗಳು: ಡಿ.ಕೆ.ಮುರುಳೀಧರ್