Home Advertisement
Home ತಾಜಾ ಸುದ್ದಿ ಬಿಜೆಪಿ ಸಂಸದರೆಲ್ಲರೂ ಸೇರಿ ಬಡವರಿಗೆ ಅಕ್ಕಿ ಕೊಡಿಸಲು ಸಹಕಾರ ನೀಡಿ

ಬಿಜೆಪಿ ಸಂಸದರೆಲ್ಲರೂ ಸೇರಿ ಬಡವರಿಗೆ ಅಕ್ಕಿ ಕೊಡಿಸಲು ಸಹಕಾರ ನೀಡಿ

0
125

ಬೆಂಗಳೂರು: ಬಿಜೆಪಿಯಿಂದ 25 ಸಂಸದರಿದ್ದಾರೆ. ಎಲ್ಲ ಸಂಸದರೂ ಸೇರಿ ಬಡವರಿಗೆ ಅಕ್ಕಿ ಕೊಡಿಸಲು ಸಹಕಾರ ನೀಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಬಳಿ ಸಂಖ್ಯಾಬಲವಿದೆ, ರಾಜಕೀಯ ಪ್ರಭಾವ ಇದೆ. ಇದನ್ನು ಬಳಸಿಕೊಂಡು ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿ. ಅನ್ನಭಾಗ್ಯದ ಯೋಜನೆಗೆ ಕೇಂದ್ರದಿಂದ ಅಕ್ಕಿ ಕೊಡಿಸಲು ಸಹಕಾರ ನೀಡಿ ಎಂದು ಅವರು ಕೋರಿದ್ದಾರೆ.