ಇಳಕಲ್: ಹುನಗುಂದ ಮತ್ತು ಇಳಕಲ್ ಅವಳಿ ತಾಲೂಕುಗಳಲ್ಲಿ ಮುಂಗಾರು ಮಳೆ ವಿಫಲವಾದ ಹಿನ್ನೆಲೆಯಲ್ಲಿ ತಾಲೂಕಿನ ರೈತರ ಬೆಳೆಗಳು ಒಣಗುತ್ತಿದ್ದು ತಾಲೂಕನ್ನು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿ ರೈತರಿಗೆ ಸಹಾಯಧನ ಮಂಜೂರು ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮನವಿ ಪತ್ರವನ್ನು ತಹಸೀಲ್ದಾರ ಬಸವರಾಜ ಮೇಳವಂಕಿ ಅವರಿಗೆ ಅರ್ಪಿಸಿದರು .
ಬಾಗಲಕೋಟ ಜಿಲ್ಲೆಯ ಇಳಕಲ್ಲ ಹುನಗುಂದ ತಾಲೂಕಿನಲ್ಲಿ ಮುಂಗಾರು ಮಳೆ ವಿಫಲವಾಗಿ ರೈತರು ಬೆಳೆದ ಬೆಳೆಗಳು ಒಣಗಿದ್ದು ಸಾಲ ಸೂಲ ಮಾಡಿ ಭರವಸೆ ಇಟ್ಟುಕೊಂಡು ಬೀಜಗಳನ್ನು ಖರೀದಿಸಿ ಹೊಲಗಳಲ್ಲಿ ಬಿತ್ತನೆ ಮಾಡಿದ್ದು ಆ ಭರವಸೆ ಈಡೇರುವಂತೆ ಕಾಣುತ್ತಿಲ್ಲ. ಈಗಾಗಲೇ ನೆಲಕ್ಕೆ ಬಿದ್ದ ಬೀಜ ಸಸಿಗಳಾಗಿ ಬೆಳೆದಿರುವುದರಿಂದ ಈಗ ಮಳೆಯ ಅವಶ್ಯಕತೆ ಇದೆ ಎಂದು ಬಾಗಲಕೋಟ ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ ಹೇಳಿದರು.
ಅದಕ್ಕಾಗಿ ರೈತರ ಸಂಕಷ್ಟಗಳನ್ನು ಅರಿತು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿ ಸಹಾಯಧನ ನೀಡಬೇಕು. ರೈತರ ಮನವಿಯನ್ನು. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ತಲುಪಿಸಿ ಶೀಘ್ರವೇ ರೈತರಿಗೆ ಸಹಾಯಧನ ನೀಡಬೇಕು ಎಂದು ಕಾರ್ಯಾಧ್ಯಕ್ಷ ಗುರು ಗಾಣಿಗೇರ ಮನವಿ ಮಾಡಿದರು.
ಇಳಕಲ್ ತಾಲೂಕ್ ಸಂಪೂರ್ಣ ನೀರಾವರಿ ವ್ಯಾಪ್ತಿಗೆ ಒಳಪಡಬೇಕು, ಅವಳಿ ತಾಲೂಕಿನ ಕೆರೆಗಳ ಅಭಿವೃದ್ಧಿಪಡಿಸಿ ನೀರು ತುಂಬಿಸಬೇಕು, ಹೊಲಗಳಿಗೆ ಹೋಗುವ ರಸ್ತೆ ಸುಧಾರಣೆ ಮಾಡಬೇಕು, ಅವಳಿ ತಾಲೂಕಿನ ರೈತರ ಪಂಪಸೆಟ್ ಗಳಿಗೆ ಹಗಲು ಹೊತ್ತು ಗುಣಮಟ್ಟದ ತ್ರಿಫೇಸ್ ೧೦ ತಾಸು ವಿದ್ಯುತ್ ಪೂರೈಸಬೇಕು, ಇಳಕಲ್ ತಾಲೂಕಿನಲ್ಲಿ ಪೂರ್ಣಾವಧಿಯ ನ್ಯಾಯಾಲಯವನ್ನು ಸ್ಥಾಪಿಸಿ ಜನರಿಗೆ ಶೀಘ್ರವಾಗಿ ನ್ಯಾಯ ದೊರಕಿಸಿಕೊಡಲು ಅನುಕೂಲ ಮಾಡಿಕೊಡಬೇಕು, ಈ ಮೊದಲಿನ ಸರಕಾರ ಜಾರಿಗೆ ತಂದ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು, ರೈತರ ಜಮೀನಿನ ಪಹಣಿ ಪತ್ರಿಕೆ ಪಡೆಯಲು ಈಗ ೨೫ ರೂಪಾಯಿಗಳನ್ನು ಮಾಡಿದ್ದು ಅದನ್ನು ಹಿಂದಿನAತೆ ರೂ.೧೦ ಗಳಿಗೆ ಇಳಿಸಬೇಕು ಎಂದು ಮನವಿಯಲ್ಲಿ ಹೇಳಿದರು. ವಿಜಯ ಮಹಾಂತೇಶ ದಾಸೋಹ ಭವನದಲ್ಲಿ ಸೇರಿದ ತಾಲೂಕಿನ ರೈತರು ಮೆರವಣಿಗೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ತೆಗೆದುಕೊಂಡು ಹೋದರು. ಅಲ್ಲಿಂದ ತಹಸೀಲ್ದಾರ ಕಚೇರಿಗೆ ತೆರಳಿ ಅಲ್ಲಿ ಮನವಿ ಪತ್ರವನ್ನು ಅರ್ಪಿಸಲಾಯಿತು. ಈ ಸಮಯದಲ್ಲಿ ಇಳಕಲ್ ತಾಲೂಕಾ ಅಧ್ಯಕ್ಷ ಮೋಹಶಿನ್ ನಧಾಪ್, ಹುನಗುಂದ ಅಧ್ಯಕ್ಷ ಬಸನಗೌಡ ಪೈಲ್, ಸದಸ್ಯರಾದ ಎಂ.ಆರ್.ಪಾಟೀಲ, ರಸೂಲ್ ಸಾಬ್ ತಶಿಲ್ದಾರ್, ಮಾಲಿಂಗಪ್ಪ ಅವಾರಿ, ಬಸವರಾಜ್ ಹುಡೆದಮನಿ.ಬಸನಗೌಡ ಪಾಟೀಲ ಕಿಲ್ಲಾ .ಅಜಯಕುಮಾರ. ಹಾಲಗಂಗಾಧರಮಠ.ಮುತ್ತುರಾಜ ಕರಡಿ. ಉಸ್ಮಾನಾಬ ಹುಣಚಗಿ. ಹನಮಂತಪ್ಪ ಕರಕಪ್ಪ ತೊಪಲಕಟ್ಟಿ. ಕನಸಾವಿ.ವೆಂಕಣ್ಣ ತೆಗ್ಗಿಮನೆ.ರಾಜಮಹ್ಮದ ನದಾಫ. ವಿಷ್ಣು ರಜಪೂತ. ಇತರ ಸಂಘಟನೆಯ ಮುಖಂಡರು ಇದ್ದರು.