ಮದುವೆ ಅಂದ್ರೆ ಇಂದು ಭಿನ್ನ ವಿಭಿನ್ನ ಅನ್ನುವ ರೀತಿ ನಡೆದಿವೆ. ಅದರಲ್ಲೂ ಅನೇಕ ರೀತಿಯ ವಿಶೇಷಗಳನ್ನು ನಾವು ನೋಡುತ್ತೇವೆ. ಆದರೆ ಇಲ್ಲಿ ಯುವತಿಯೊಬ್ಬಳು ಭಗವಂತನನ್ನೇ ಮದುವೆಯಾಗಿದ್ದಾಳೆ ಅಂದರೆ ನೀವು ನಂಬಲೇಬೇಕು.
ಹೌದು.. ಉತ್ತರಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಕಾನೂನು ಪದವಿ ವಿದ್ಯಾರ್ಥಿನಿ ರಕ್ಷಾ ಎಂಬಾಕೆಯೇ ಕೃಷ್ಣ ಭಕ್ತಿಯ ಪರಾಕಾಷ್ಠೆ ಇದು. ಮೊದಲಿನಿಂದಲೂ ಈಕೆಗೆ ಗೋಪಾಲ ಬಹಳ ಇಷ್ಟ. ಆತನನ್ನೇ ಪೂಜಿಸುತ್ತಾ ಬಂದಿದ್ದ ಈಕೆ ಇಂದು ಆತನನ್ನೇ ವರಿಸಿದ್ದಾಳೆ. ಇದಕ್ಕೆ ಆಕೆಯ ತಂದೆಯೂ ಸಮ್ಮತಿಸಿದ್ದು, ಮನೆ ಮಂದಿ ಬೀಗರು ಸೇರಿಕೊಂಡು ಶಾಸ್ತ್ರೋಕ್ತವಾಗಿ ಮಂಗಲಕಾರ್ಯ ಮುಗಿಸಿದ್ದಾರೆ.