ಕ್ಯಾನ್ಸರ್‌ ಪೀಡಿತ ಪುಟಾಣಿ ಅಭಿಮಾನಿಯನ್ನ ಭೇಟಿ ಮಾಡಿದ ಕಿಚ್ಚ

0
9

ಬೆಂಗಳೂರು: ಕ್ಯಾನ್ಸರ್‌ ಪೀಡಿತ ಪುಟಾಣಿ ಅಭಿಮಾನಿಯನ್ನು ಭೇಟಿಯಾಗುವ ಮೂಲಕ ನಾಯಕ ನಟ ಕಿಚ್ಚ ಸುದೀಪ್‌ ಆಕೆಯ ಆಸೆಯನ್ನು ಈಡೇರಿಸಿದ್ದಾರೆ.
ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಕ್ಷಿ ಎಂಬ ಬಾಲಕಿ, ಕಿಚ್ಚ ಸುದೀಪ್‌ ಅವರ ಅಪ್ಪಟ ಅಭಿಮಾನಿ. ಕಳೆದ ಕೆಲ ದಿನಗಳಿಂದ ಸುದೀಪ್‌ ಅವರನ್ನು ಭೇಟಿ ಮಾಡಬೇಕೆಂಬ ಕನಸು ಕಂಡಿದ್ದಳು. ಬಾಲಕಿಯ ಈ ಆಸೆ ಸುದೀಪ್‌ ಅವರ ಗಮನಕ್ಕೂ ಬಂದಿತ್ತು. ತಡಮಾಡದೇ ಆಸ್ಪತ್ರೆಗೆ ಬಂದ ಸುದೀಪ್‌, ಬಾಲಕಿಯಿದ್ದ ಆಸ್ಪತ್ರೆಗೆ ಆಗಮಿಸಿ ಸಾಕ್ಷಿಯ ಆಸೆಯನ್ನು ಈಡೇರಿಸಿದ್ದಾರೆ. ಸದ್ಯ ಪಟಾಣಿಯನ್ನು ಭೇಟಿಯಾದ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

Previous articleಮಹಿಳೆ ಸಶಕ್ತರಾದರೆ ದೇಶ ಸಶಕ್ತವಾದಂತೆ ಕ್ರಿಶನ್ ಪಾಲ್ ಗುರ್ಜರ್
Next articleಅವಿಭಜಿತ ದ. ಕ. ಜಿಲ್ಲೆಯಲ್ಲಿ ಮಳೆ ಆರ್ಭಟ: ನಾಲ್ವರು ಸಾವು