ಕಾಮಿನಿ ನದಿ ಹಾಗೂ ಸಮುದ್ರ ಮಾರ್ಗ ಮಧ್ಯೆ ತಡೆಗೋಡೆ

0
21

ಬೆಳಗಾವಿ: ಕಾಮಿನಿ ನದಿ ಹಾಗೂ ಸಮುದ್ರ ಮಾರ್ಗ ಮಧ್ಯೆ ತಡೆಗೋಡೆ ನಿರ್ಮಿಸಿಕೊಡುವಂತೆ ಮನವಿ ಸ್ವೀಕರಿಸಿ ಪರ್ಯಾಯ ವ್ಯವಸ್ಥೆಯನ್ನು ಮಾಡಿ ಕೊಡುವದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಇಂದು ಉಡುಪಿಯ ಲೋಕೋಪಯೋಗಿ ಇಲಾಖೆಯ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಸತತ ಮಳೆಯಿಂದ ತತ್ತರಿಸಿರುವ ಉಡುಪಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಭೇಟಿ ನೀಡಿದರು, ಕಡಲ ಕೊರೆತದಿಂದ ಸಾಕಷ್ಟು ಹಾನಿಗೊಳಗಾಗಿರುವ ಪಡುಬಿದ್ರಿ ಬೀಚ್ ಬಳಿ ಪರಿಶೀಲನೆ ನಡೆಸಿದರು‌ ಅಲ್ಲದೆ, ಪಡುಬಿದ್ರಿ ಗ್ರಾಮಸ್ಥರು ಕಾಮಿನಿ ನದಿ ಹಾಗೂ ಸಮುದ್ರ ಮಾರ್ಗ ಮಧ್ಯೆ ತಡೆಗೋಡೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು. ಅವರ ಮನವಿಯನ್ನು ಸ್ವೀಕರಿಸಿ, ಪರ್ಯಾಯ ವ್ಯವಸ್ಥೆಯನ್ನು ಮಾಡಿ ಕೊಡುವ ಬಗ್ಗೆ ಚರ್ಚಿಸಿದ್ದೇನೆ ಎಂದಿದ್ದಾರೆ.

Previous articleರಾಜೀಸಂದಾನ ಮೂಲಕ ಮತ್ತೆ “ಒಂದಾಗೋಣ ಬಾ”
Next articleಸಿಎಂ ಆರೋಗ್ಯದಲ್ಲಿ ಏರುಪೇರು