ಎಚ್3ಎನ್2 ಭೀತಿ: ನಾಳೆ ಮಹತ್ವದ ಸಭೆ

0
37

ಬೆಂಗಳೂರು: ರಾಜ್ಯದಲ್ಲಿ ಇನ್‌ಫ್ಲುಯೆಂಜಾ ಎ ಸಬ್‌ಟೈಪ್ ‘ಎಚ್3ಎನ್2’ ಹರಡುವಿಕೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ತಡೆಗಟ್ಟುವ ಕ್ರಮಗಳ ಕುರಿತು ಚರ್ಚಿಸಲು ಮಾರ್ಚ್ 6 ರಂದು (ಸೋಮವಾರ) ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಭೆ ಕರೆಯಲಾಗಿದೆ. ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನ’ದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಧಾನಸೌಧದ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ‌ ನಿರ್ದೇಶನಾಲಯ ಆಯೋಜಿಸಿದ್ದ ‘ಸೈಕ್ಲೋಥಾನ್’ ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಆರೋಗ್ಯ ಸಚಿವಾಲಯವು ನಮಗೆ ಎಚ್3ಎನ್2 (H3N2) ಬಗ್ಗೆ ಗಮನ ಹರಿಸಲು ಆದೇಶ ನೀಡಿದೆ. ನಮ್ಮ ಆರೋಗ್ಯ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲು ನಾಳೆ ಸಭೆ ಕರೆಯಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು” ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ. ದೇಶದ ಹಲವು ಪ್ರದೇಶಗಳಲ್ಲಿ ಕಳೆದ ಎರಡು ತಿಂಗಳಿಂದ ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಇದರಲ್ಲಿ ಬಹುತೇಕ ಮಂದಿ ಕೆಮ್ಮು, ಶೀತಜ್ವರ (ಇನ್‌ಫ್ಲುಯೆಂಜಾ)ದಿಂದ ಬಳಲುತ್ತಿರುವುದು ಕಂಡು ಬಂದಿವೆ. 2 ವರ್ಷಗಳ ಕೋವಿಡ್ ಕಾಲದ ಬಳಿಕ ಜ್ವರ, ಕೆಮ್ಮಿನಂತಹ ಅನಾರೋಗ್ಯಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದರು

Previous articleಅವಳಿನಗರದ ಪೊಲೀಸ್ ಕಮಿಷನರೇಟ್‌ ಡಿಸಿಪಿಯಾಗಿ ರಾಜೀವ್‌
Next articleಧರ್ಮಗುರುಗಳಿಂದ ಹಿಂಸೆಯಲ್ಲಿ ತೊಡಗಿರುವವರ ಮನ:ಪರಿವರ್ತನೆ ಸಾಧ್ಯ – ಸಿಎಂ ಬೊಮ್ಮಾಯಿ