ದಾವಣಗೆರೆ: ನನ್ನಿಂದ ಅರ್ಜಿ ಪಡೆದು ಬಿ ಫಾರ್ಮ್ ಕೊಡುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡರು ವಿಶ್ವಾಸದ್ರೋಹ ಎಸಗಿದ್ದಾರೆ. ನಾನೀಗ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ಯಾವುದೇ ಕಾರಣಕ್ಕೂ, ಯಾರೇ ಹೇಳಿದ್ರೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಕಠೋರ ಮಾತುಗಳಲ್ಲಿ ಹೇಳಿದ್ದಾರೆ.
ಸತತ 40 ವರ್ಷ ಶಾಮನೂರು ಶಿವಶಂಕರಪ್ಪನವರ ಮನೆಯ ಮಗನಾಗಿ ಸೇವೆ ಸಲ್ಲಿಸಿದ್ದೇನೆ. ಅವರ ನಿಧನದ ನಂತರವಾದರೂ ಅಲ್ಪಸಂಖ್ಯಾತರಿಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ನಾನು ಪಕ್ಷಕ್ಕಾಗಿ ನನ್ನ ಜೀವವನ್ನೇ ಸವೆಸಿದ್ದೇನೆ. ಆದರೆ ಪಕ್ಷ ನನಗೆ ನಂಬಿಕೆದ್ರೋಹ ಮಾಡಿತು ಎಂದು ಅಸಮಾಧಾನ ಹೊರ ಹಾಕಿದರು.























