Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಜಮೀರ್ ಅಲ್ಲ, ಭಗವಂತ ಬಂದ ಹೇಳಿದ್ರು ಹಿಂದೆ ಸರಿಯಲ್ಲ

ಜಮೀರ್ ಅಲ್ಲ, ಭಗವಂತ ಬಂದ ಹೇಳಿದ್ರು ಹಿಂದೆ ಸರಿಯಲ್ಲ

0
186

ದಾವಣಗೆರೆ: ಅಲ್ಪಸಂಖ್ಯಾತರು ಹಾಗೂ ಅಹಿಂದ ವರ್ಗದವರನ್ನು ಕಡೆಗಣಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ತಕ್ಕ ಪಾಠ ಕಲಿಸಲಿಕ್ಕಾಗಿಯೇ ತಾವು ಕಣಕ್ಕಿಳಿದಿದ್ದು, ಯಾವುದೇ ಕಾರಣಕ್ಕೂ ತಾವು ಹಿಂದೆ ಸರಿಯುವುದಿಲ್ಲ ಎಂದು ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ನಾಮಪತ್ರ ವಾಪಸ್ ಪಡೆದಿರುವುದಾಗಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇಂತಹ ಅಪಪ್ರಚಾರ ಮಾಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದರು.

ಕಾಂಗ್ರೆಸ್‌ನಿಂದ ಸಮಾಜದ ಉಲಮಾಗಳು ಹಾಗೂ ಅಲ್ಪಸಂಖ್ಯಾತರ ಮನಸ್ಸಿಗೆ ನೋವುಂಟು ಮಾಡಲಾಗಿದೆ. ಹೀಗಾಗಿ ನಾನು ಕಣದಲ್ಲಿ ಉಳಿಯುವುದು ಖಚಿತ. ನಮ್ಮ ಸಮುದಾಯದ ಜಮೀರ್ ಅಹಮದ್ ಅಲ್ಲ ಪರಮಾತ್ಮನೇ ಬಂದು ಹೇಳಿದರೂ ನಾಮಪತ್ರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಛರಿಸಿದರು.

ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಸುರ್ಜೇವಾಲಾ ಅವರು ಅಲ್ಪಸಂಖ್ಯಾತರನ್ನು ಕಡೆಗಣಿಸಿರುವುದರಿಂದ ಜಿಲ್ಲೆಯ ಜನತೆಯಲ್ಲಿ ಅಸಮಾಧಾನ ಮೂಡಿದೆ. ಕಣದಿಂದ ಹಿಂದೆ ಸರಿಯಲು ಪಕ್ಷದ ನಾಯಕರು ಮೊದಲು ನಮ್ಮ ಸಮಾಜದ ಹಿರಿಯರ ಹಾಗೂ ನೊಂದಿರುವ ಅಹಿಂದ ವರ್ಗದ ಜನರ ಮನವೊಲಿಸಲಿ ಜನರ ತೀರ್ಪಿಗೆ ನಾನು ಬದ್ಧ ಎಂದರು.

ಈಗಾಗಲೇ ಕಣದಲ್ಲಿರುವ ಇತರ ಅಲ್ಪಸಂಖ್ಯಾತ ಅಭ್ಯರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ವಿರುದ್ಧ ಹೋರಾಡಲು ನಿರ್ಧರಿಸಲಾಗಿದೆ. ಜಮೀರ್ ಅಹಮದ್ ಅವರಂತಹ ನಾಯಕರು ಪ್ರಚಾರಕ್ಕೆ ಬಂದರೂ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

2028ರ ವಿಧಾನಸಭಾ ಚುನಾವಣೆಯ ಮೇಲೂ ಇದು ಪರಿಣಾಮ ಬೀರಲಿದ್ದು, ಅಲ್ಪಸಂಖ್ಯಾತರ ಶಕ್ತಿಯನ್ನು ತೋರಿಸುವುದಾಗಿ ಸಾದಿಕ್ ಪೈಲ್ವಾನ್ ಈ ಸಂದರ್ಭದಲ್ಲಿ ಎಚ್ಚರಿಸಿದರು.