ದಾವಣಗೆರೆ ಎಸ್ಪಿ ವಿರುದ್ಧ ಟೀಕೆ: ಬಿಜೆಪಿ ಶಾಸಕನಿಗೆ ಮತ್ತಷ್ಟು ಕಂಟಕ

0
218

ದಾವಣಗೆರೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರನ್ನು ಶಾಮನೂರು ಕುಟುಂಬದ ಮನೆಕಾಯುವ ನಾಯಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿರುವ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಹೇಳಿಕೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಖಂಡಿಸಿದ್ದು, ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೂರ್ವವಲಯ ಪೊಲಿಸ್ ಮಹಾನಿರ್ದೇಶಕರಿಗೆ ಆಗ್ರಹಿಸಿದೆ.

ಎಸ್ಪಿ ಉಮಾ ಪ್ರಶಾಂತ್ ಅವರು ತಾವು ಹಾಜರಿರುವ ಕಾರ್ಯಕ್ರಮಗಳಿಗೆ ಆಗಮಿಸಿದಾಗ ಮುಖ ತಿರುಗಿಸುತ್ತಾರೆ. ಶಾಮನೂರು ಕುಟುಂಬದವರಿಗೆ ನಾಯಿ ರೀತಿ ನಡೆದುಕೊಳ್ಳುತ್ತಾರೆ ಎಂದು ಮಹಿಳಾ ಅಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಅಪಮಾನಿಸಿರುವುದನ್ನು ಆಯೋಗದ ಕಾರ್ಯದರ್ಶಿಗಳು ಖಂಡಿಸಿದ್ದು, ಕ್ರಮಕ್ಕೆ ಆಗ್ರಹಿಸಿ ಪತ್ರ ಮುಖೇನ ಮನವಿ ಮಾಡಿದ್ದಾರೆ.

Previous articleಸಿಎಂ ಸಿದ್ದರಾಮಯ್ಯ ಮನೆಯಲ್ಲೂ ಹಿಂದುಳಿದ ವರ್ಗಗಳ ಸಮೀಕ್ಷೆ, ಸ್ಟಿಕ್ಕರ್ ಅಂಟಿಸಿದ ಸಿಬ್ಬಂದಿ
Next articleಜಿಎಸ್‌ಟಿಯಲ್ಲಿ ಭಾರೀ ಬದಲಾವಣೆ: ಕರ್ನಾಟಕಕ್ಕೆ ಆಗುವ ನಷ್ಟ ಎಷ್ಟು?

LEAVE A REPLY

Please enter your comment!
Please enter your name here