ಬೆಳಗಾವಿ: ಹೋರಾಟ ಮಾಡುವಾಗ ರೈತ ಅಸ್ವಸ್ಥ – ಆಸ್ಪತ್ರೆಗೆ ದಾಖಲು

0
4

ಬೆಳಗಾವಿ: ಸುವರ್ಣ ಗಾರ್ಡನ್ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಇಡೇರಿಸುವಂತೆ ಒತ್ತಾಯಿಸುತ್ತಾ ನಡೆಯುತ್ತಿರುವ ಬೃಹತ್ ಪ್ರತಿಭಟನೆ ವೇಳೆ ರಾಯಬಾಗ ತಾಲೂಕಿನ ಕುಡಚಿ ಗ್ರಾಮದ ರೈತ ಯಲ್ಲಪ್ಪಾ ಹಿರೇಕುರಬರ (35) ಅವರು ಆಕಸ್ಮಿಕವಾಗಿ ಅಸ್ವಸ್ಥರಾಗಿರುವ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.

ಪ್ರತಿಭಟನೆ ಸ್ಥಳದಲ್ಲಿ ಭಾರೀ ಒತ್ತಡ, ಜನಸಮೂಹ ಹಾಗೂ ದೀರ್ಘ ಕಾಲದಿಂದ ಕೂಗಾಟ, ಘೋಷಣೆಗಳ ನಡುವೆಯೇ ರೈತರಿಗೆ ಪೀಟ್ಸ್‌ (ಬಿಪಿ/ಛಕ್ಕರ ಏರಿಳಿತ ಶಂಕೆ) ಉಂಟಾಗಿದ್ದು ತಲೆ ಸುತ್ತಿ ನೆಲಕ್ಕೆ ಬಿದ್ದಿದ್ದಾರೆ. ಸ್ಥಳದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಂತರ ಕೆಲವು ಕ್ಷಣಗಳು ಪ್ರತಿಭಟನೆ ಸ್ಥಳದಲ್ಲಿ ಆತಂಕ ಹಾಗೂ ಗೊಂದಲ ನಿರ್ಮಾಣವಾದರೂ, ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸಹ ರೈತರು, ಸಂಘಟಕರು ಹಾಗೂ ಪೊಲೀಸರು ತಕ್ಷಣವೇ ಅಗತ್ಯ ನೆರವು ಒದಗಿಸಿದರು. ಬೇಡಿಕೆಗಳು ಇನ್ನೂ ಸ್ಪಷ್ಟ ಪರಿಹಾರ ಕಂಡುಕೊಳ್ಳದ ಹಿನ್ನಲೆಯಲ್ಲಿ ಆಗುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ರೈತರ ಮಾನಸಿಕ ಹಾಗೂ ಶಾರೀರಿಕ ಒತ್ತಡ ಹೆಚ್ಚಾಗಿರುವುದಾಗಿ ಸಂಘಟಕರು ತಿಳಿಸಿದ್ದಾರೆ.

ಯಲ್ಲಪ್ಪಾ ಹಿರೇಕುರಬರ ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಗೆ ಸೇರಿದ ಮೂಲಗಳು ತಿಳಿಸಿವೆ. ರೈತರಿಗೆ ಬೇಕಾದ ಬೇಡಿಕೆಗಳನ್ನು ತ್ವರಿತವಾಗಿ ಮೌಲ್ಯಮಾಪನ ಮಾಡಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಡ ಪ್ರತಿಭಟನೆಯಲ್ಲಿ ಮುಂದುವರಿದಿದೆ.

Previous articleಬೆಂಬಲ ಬೆಲೆಯಡಿ ತೊಗರಿ ಖರೀದಿಗೆ ಅನುಮತಿ ನೀಡಿ: ಪ್ರಧಾನಿಗೆ ಸಿಎಂ ಪತ್ರ