ಸೇತುಬಂಧ್ ಯೋಜನೆಯಡಿ ಕೇಂದ್ರದಿಂದ ₹784 ಕೋಟಿ ಅನುದಾನ

0
11

ಬೆಂಗಳೂರು: ಧಾರವಾಡದ‌ ಅಣ್ಣಿಗೇರಿ ಪಟ್ಟಣದ ರೈಲ್ವೆ ಗೇಟ್ ನಂ.19 ಹಾಗೂ ಅಳ್ನಾವರ ಪಟ್ಟಣದ ಅಂಡರ್ ಬ್ರಿಡ್ಜ್ ಅಗಲೀಕರಣ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಹೇಳಿದ್ದಾರೆ, ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು “ಸೇತುಬಂಧ್ ಯೋಜನೆಯಡಿ ರಾಜ್ಯದಲ್ಲಿ ₹784 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ 22 ಮೇಲ್ಸೇತುವೆಗಳ ಪೈಕಿ ಎರಡು ಮೇಲ್ಸೇತುವೆಗಳು ನಮ್ಮ ಧಾರವಾಡದ‌ ಅಣ್ಣಿಗೇರಿ ಪಟ್ಟಣದ ರೈಲ್ವೆ ಗೇಟ್ ನಂ.19 ಹಾಗೂ ಅಳ್ನಾವರ ಪಟ್ಟಣದ ಅಂಡರ್ ಬ್ರಿಡ್ಜ್ ಅಗಲೀಕರಣ ನಡೆಯಲಿದೆ. ಈ ಎರಡೂ ಕಾಮಗಾರಿಗೆ ತಲಾ 30 ಕೋಟಿ ಅನುದಾನ ಇರಿಸಲಾಗಿದ್ದು, ಮುಂದಿನ 24 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಯೋಜನೆಯಿದೆ. ಈ ಎರಡು ಮಹತ್ತರವಾದ ಯೋಜನೆಯಿಂದ ಖಾನಾಪೂರ – ಅಳ್ನಾವರ – ಹಳಿಯಾಳ ಹಾಗೂ ಅಣ್ಣಿಗೇರಿ – ಹಳ್ಳಕೇರಿ ಹಾಗೂ ಇಬ್ರಾಹಿಮಪುರ ಮುಖ್ಯರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರೈಲ್ವೆ ಗೇಟ್ ರಹಿತವಾಗಿ ಯಾವುದೇ ಅಡೆತಡೆ ಇಲ್ಲದೆ ಸಂಚರಿಸಬಹುದಾಗಿದೆ. ನಮ್ಮ ಪ್ರಸ್ತಾವನೆಗೆ ಶೀಘ್ರ ಸ್ಪಂದಿಸಿ ಅನುಮೋದಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ‌ ಹಾಗೂ ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಧನ್ಯವಾದಗಳುʼ ಎಂದಿದ್ದಾರೆ.

Previous articleಮನೆಗೋಡೆ ಕುಸಿದು ಗಾಯಗೊಂಡಿದ್ದ ಮಗು ಸಾವು
Next articleಶಾಸಕರ ದಂಗೆ ವಿಚಾರ ಗೊತ್ತಿಲ್ಲ: ಗುರುವಾರ ಶಾಸಕಾಂಗ ಪಕ್ಷದ ಸಭೆ