ರೈತರಿಗಾಗಿ ಸಂತಸದ ಸುದ್ದಿ! ಇಂದಿನಿಂದ ಖರೀದಿ ಕೇಂದ್ರ ಆರಂಭ

1
32

ಬೆಂಗಳೂರು: ರೈತರಿಗಾಗಿ ಸಂತಸದ ಸುದ್ದಿ! ಇಂದಿನಿಂದಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಯಾಬಿನ್‌, ಸೂರ್ಯಕಾಂತಿ ಹಾಗೂ ಹೆಸರುಕಾಳು ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ಕಾರ್ಯ ಆರಂಭವಾಗಲಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಸಚಿವರು ನೀಡಿದ ಮಾಹಿತಿಯ ಪ್ರಕಾರ, ಸೋಯಾಬಿನ್‌ ಖರೀದಿಗೆ ರಾಜ್ಯದಾದ್ಯಂತ 206 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಈಗಾಗಲೇ 19,325 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.
ಇದರಲ್ಲಿ ಬೀದರ್ ಜಿಲ್ಲೆಯಲ್ಲಿ 116 ಕೇಂದ್ರಗಳು ತೆರೆಯಲ್ಪಟ್ಟಿದ್ದು, 13,033 ರೈತರು ನೋಂದಾಯಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 3,047, ಧಾರವಾಡ ಜಿಲ್ಲೆಯಲ್ಲಿ 2,164 ರೈತರು ತಮ್ಮ ಹೆಸರು ನೋಂದಾಯಿಸಿದ್ದಾರೆ.

ಹೆಸರುಕಾಳು ಖರೀದಿಗಾಗಿ 211 ಖರೀದಿ ಕೇಂದ್ರಗಳು ತೆರೆಯಲ್ಪಟ್ಟಿದ್ದು, 16,578 ರೈತರು ನೋಂದಣಿ ಮಾಡಿದ್ದಾರೆ.
ಸೂರ್ಯಕಾಂತಿ ಖರೀದಿಗೆ 120 ಕೇಂದ್ರಗಳು, ಉದ್ದಿನಕಾಳಿಗೆ 134 ಕೇಂದ್ರಗಳು ಆರಂಭಗೊಂಡಿದ್ದು, ಕ್ರಮವಾಗಿ 5,341 ಮತ್ತು 5,274 ರೈತರು ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ರೈತರ ಹಿತದೃಷ್ಟಿಯಿಂದ ಸರ್ಕಾರ ಬೆಂಬಲ ಬೆಲೆ ಖರೀದಿಯನ್ನು ಪಾರದರ್ಶಕವಾಗಿ ಮತ್ತು ತಾಂತ್ರಿಕ ಆಧಾರದ ಮೇಲೆ ನಡೆಸಲು ಕ್ರಮಕೈಗೊಂಡಿದ್ದು, ಎಲ್ಲೆಡೆ ನೋಂದಣಿ ಹಾಗೂ ತೂಕಮಾಪನ ವ್ಯವಸ್ಥೆ ಡಿಜಿಟಲ್‌ ರೂಪದಲ್ಲಿ ಜಾರಿಯಲ್ಲಿದೆ ಎಂದು ಸಚಿವರು ಹೇಳಿದರು.

Previous articleಧಾರವಾಡ: ಸರಕಾರ ಆದೇಶಕ್ಕೆ ಹಿನ್ನಡೆ — ಹೈಕೋರ್ಟ್ ಮಧ್ಯಂತರ ತಡೆ
Next articleಭಾರತದಲ್ಲಿ ChatGPT Go ಒಂದು ವರ್ಷ ಉಚಿತ

1 COMMENT

LEAVE A REPLY

Please enter your comment!
Please enter your name here