SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಭರತ ರೆಡ್ಡಿ ಬೆಂಬಲಿಗರ ವಿರುದ್ಧವೂ ದೂರು

ಭರತ ರೆಡ್ಡಿ ಬೆಂಬಲಿಗರ ವಿರುದ್ಧವೂ ದೂರು

0
155

ಬಳ್ಳಾರಿ: ಜನಾರ್ದನ ರೆಡ್ಡಿ ಮನೆಗೆ ಅತಿಕ್ರಮ ಪ್ರವೇಶ, ಜಾತಿನಿಂದನೆ, ಹಲ್ಲೆಗೆ ಯತ್ನ ಆರೋಪದಡಿ ಶಾಸಕ ಭರತ ರೆಡ್ಡಿ ಆಪ್ತರಾದ ಸತೀಶ ರೆಡ್ಡಿ, ಚಾನಾಳ ಶೇಖರ್, ಲೋಕೇಶ ಅವಂಬಾವಿ, ಗಂಗಾಧರ ಸೇರಿ ಹಲವು ಜನರ ವಿರುದ್ಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.

ಜನಾರ್ದನ ರೆಡ್ಡಿ ಮನೆಯಲ್ಲಿ ಕೆಲಸ ಮಾಡುತ್ತಿರುವ ನಾಗರಾಜ ದೂರು ನೀಡಿದ್ದಾರೆ. ಸ್ವತಃ ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ ಬ್ರೂಸ್ ಪೇಟೆ ಠಾಣೆ ಪೊಲೀಸರು ಜನಾರ್ದನ ರೆಡ್ಡಿ ಮನೆಗೆ ಆಗಮಿಸಿ ದೂರು ಪಡೆದಿದ್ದಾರೆ.