ದಾಂಡೇಲಿ ಜಿ+2 ಮನೆಗಳ ಸಮಸ್ಯೆ ಪರಿಹಾರ: ಸಂಸದರ ಭರವಸೆ

0
59

ದಾಂಡೇಲಿ: ದಾಂಡೇಲಿ ನಗರದಲ್ಲಿ ನಗರಸಭೆ ಹಾಗೂ ಕರ್ನಾಟಕ ಗೃಹ ಮಂಡಳಿಯಿಂದ ಆಶ್ರಯ ಯೋಜನೆಯಲ್ಲಿ ನಿರ್ಮಿಸುತ್ತಿರುವ 1108 ಜಿ+2 ಮನೆಗಳ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತು ಕಳೆದ ಎಂಟು ವರ್ಷಗಳಿಂದ ಫಲಾನು ಭವಿಗಳು ಅನುಭವಿಸುತ್ತಿರುವ ಗೋಳಾಟವನ್ನು ಪ್ರಾಮಾಣಿಕವಾಗಿ ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿರುವುದಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ ಮತ್ತು ಫಲಾನುಭವಿಗಳು ಅಳ್ನಾವರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಅವರ ಮನವಿಗೆ ಸ್ಪಂದಿಸಿದ ಸಂಸದರ ಈ ಕುರಿತು ಕಾರವಾರದಲ್ಲಿ ಜರುಗಿದ ದಿಶಾ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು ಅತಿ ಶೀಘ್ರದಲ್ಲಿ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಮನೆ ವಿತರಿಸುವಂತೆ ಸೂಚಿಸಲಾಗಿದೆ ಎಂದರು.

ಈಗಾಗಲೇ 100 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. 84 ಮನೆಗಳ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ಇನ್ನುಳಿದ ಎಂಟು ನೂರಕ್ಕೂ ಹೆಚ್ಚು. ಮನೆಗಳ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಫಲಾನುಭವಿಗಳು ಮನೆಗಾಗಿ ಹಣ ಕಟ್ಟಿ ಕಳೆದ 8 ವರ್ಷಗಳಿಂದ ಕಾಯುತ್ತಿರುವದು, ಮನೆ ಭಾಡಿಗೆ ಕಟ್ಟಿ ಹೈರಾಣಾಗಿರುವದು ತಮಗೆ ತಿಳಿದಿದೆ ಎಂದಿದ್ದಾರೆ.

ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಬೆಂಗಳೂರಿನ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳೊಟ್ಟಿಗೆ, ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿದ್ದೇನೆ. ಅತಿ ಶೀಘ್ರದಲ್ಲೆ ಎಲ್ಲ ಫಲಾನುಭವಿಗಳಿಗೆ ಮನೆ ವಿತರಿಸುವ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ತಿಳಿಸಿದರು.

Previous articleಬೀಜಿಂಗ್: ಭಾರತದ ಸ್ಕೇಟಿಂಗ್‌ಗೆ ಐತಿಹಾಸಿಕ ಚಿನ್ನ – ಆನಂದ್‌ಕುಮಾರ್ ವೇಲ್‌ಕುಮಾರ್ ವಿಶ್ವ ಚಾಂಪಿಯನ್!
Next articleಧಾರವಾಡ: ಆಹಾರ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ ನೀಡಿ ; ಸಿಎಂ

LEAVE A REPLY

Please enter your comment!
Please enter your name here