Home Advertisement
Home ಅಪರಾಧ ಕಾರ್ ಲಾರಿ ಅಪಘಾತದಲ್ಲಿ ರಾಜಕಾರಣಿ ಸಾವು

ಕಾರ್ ಲಾರಿ ಅಪಘಾತದಲ್ಲಿ ರಾಜಕಾರಣಿ ಸಾವು

0
139
accident

ಇಳಕಲ್ : ರಾಯಚೂರು ನಿಪ್ಪಾಣಿ ರಾಜ್ಯ ಹೆದ್ದಾರಿಯ ತುಂಬ ಗ್ರಾಮದ ಕ್ರಾಸ್ ಬಳಿ ನಡೆದ ಕಾರ್ ಲಾರಿ ಅಪಘಾತದಲ್ಲಿ ಕಾರ್ ಚಾಲಕ ರಾಜಕಾರಣಿಯೋರ್ವರ ದಾರುಣ ಸಾವಿಗೆ ಈಡಾಗಿದ್ದಾರೆ.
ಲಿಂಗಸಗೂರ ತಾಲೂಕಿನ ಆದಾಪೂರ ಗ್ರಾಮದ ಚನ್ನವೀರಪ್ಪ ಪಾಗದ ತಮ್ಮ ಕಾರು ತೆಗೆದುಕೊಂಡು ಹೊರಟಾಗ ಎದುರಿಗೆ ಬಂದ ಲಾರಿಗೆ ಡಿಕ್ಕಿ ಹೊಡೆದಾಗ ಬಿದ್ದ ಭಾರೀ ಪೆಟ್ಟಿಗೆ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ ಐ ಎಸ್ ಬಿ ಪಾಟೀಲ ತನಿಖೆ ನಡೆಸಿದ್ದಾರೆ. ಚನ್ನವೀರಪ್ಪ ಪಾಗದ ಸಾವಿಗೆ ಇಳಕಲ್ ಮತ್ತು ಲಿಂಗಸಗೂರು ತಾಲೂಕಿನ ಪ್ರಮುಖ ರಾಜಕಾರಣಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ