ಧಾರವಾಡ: ಧಾರವಾಡದ ರೂಹಿ ದೊಡ್ಡಮನಿ ಅಂಡರ್-19 ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಡಿ. 13ರಿಂದ 21ರವರೆಗೆ ಹೈದರಾಬಾದ್ನಲ್ಲಿ ಬಿಸಿಸಿಐ ಆಯೋಜಿಸಿರುವ ‘ಅಂಡರ್ -19 ವುಮೆನ್ಸ್ ಡೇ ಟ್ರೋಫಿ’ ನಡೆಯುವ ಪಂದ್ಯಾವಳಿಯಲ್ಲಿ ರೂಹಿ ಭಾಗವಹಿಸಲಿದ್ದಾಳೆ.
ಇದಕ್ಕೂ ಮುನ್ನ ಕೆಎಸ್ಸಿಎ ಆಯೋಜಿಸುವ ಮಹಾರಾಣಿ ಟ್ರೋಫಿಯಲ್ಲಿ ಮಹಾರಾಜ ವಾರಿಯರ್ಸ್ ತಂಡಕ್ಕೆ ಆಯ್ಕೆಯಾಗಿದ್ದ ರೂಹಿ ಗಮನಾರ್ಹ ಸಾಧನೆ ಮಾಡಿದ್ದಳು. ಧಾರವಾಡ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ರೂಹಿಗೆ ಜಗದೀಶ ತರಬೇತಿ ನೀಡಿದ್ದರು.




















